Bengaluru: ಬೆಂಗಳೂರು ಅರಮನೆ ಮೈದಾನದ ಜಮೀನು (Palace land dispute) ಸಂಬಂಧಿತ ವಿವಾದದಲ್ಲಿ ಸುಪ್ರೀಂ ಕೋರ್ಟ್ (Supreme Court) ರಾಜ್ಯ ಸರ್ಕಾರದ ವಿರುದ್ಧ ನಿರ್ಧಾರ ನೀಡಿದೆ. ಅರಮನೆ ಹತ್ತಿರದ 15 ಎಕರೆಗೂ ಹೆಚ್ಚು ಜಮೀನಿಗಾಗಿ, ಸುಮಾರು 3,400 ಕೋಟಿ ರೂಪಾಯಿಗೆ ಟಿಡಿಆರ್ (TDR – Transferable Development Rights) ರೂಪದಲ್ಲಿ ಪರಿಹಾರವನ್ನು ರಾಜಮನೆತನಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನೇತೃತ್ವದ ದ್ವಿ ಸದಸ್ಯ ಪೀಠ, ಈ TDR ಗಳನ್ನು ರಾಜಮನೆತನಕ್ಕೆ ತಕ್ಷಣ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಈಗಾಗಲೇ ಒಂದು ವಾರದೊಳಗೆ ಈ ಮೊತ್ತವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ಗೆ ಡಿಪಾಸಿಟ್ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು.
ಈ ಮೊತ್ತವನ್ನು ಡಿಪಾಸಿಟ್ ಮಾಡಿದರೂ, ರಾಜ್ಯ ಸರ್ಕಾರ ಮಧ್ಯಂತರ ಅರ್ಜಿಯ ಮೂಲಕ ರಾಜಮನೆತನಕ್ಕೆ ಟಿಡಿಆರ್ ಕೊಡಬಾರದು ಎಂಬ ಆಗ್ರಹವನ್ನಿಟ್ಟಿತ್ತು. ಆದರೆ, ಕೊನೆಗೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ, ಟಿಡಿಆರ್ ಕೊಡಲೇ ಬೇಕೆಂದು ತಿಳಿಸಿದೆ.
ಈ ಜಮೀನು, ರಸ್ತೆ ಅಗಲೀಕರಣದ ಭಾಗವಾಗಿ ಸ್ವಾಧೀನ ಮಾಡಲಾಗಿತ್ತು. ಎಕರೆಗಿಂತ 200 ಕೋಟಿ ರೂಪಾಯಿ ಆಗುವಂತೆ ಒಟ್ಟಿಗೆ 3,400 ಕೋಟಿ ರೂಪಾಯಿ ಮೌಲ್ಯದ ಟಿಡಿಆರ್ ಪರಿಹಾರ ನೀಡಬೇಕು ಎಂದು ಈಗ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಈ ಜಮೀನನ್ನು ಸಂಪೂರ್ಣ ಬಳಸಿಲ್ಲವಲ್ಲ, ಬಳಕೆ ಆಗದ ಭೂಮಿಗೆ ಟಿಡಿಆರ್ ನೀಡುವುದು ಹೇಗೆ ಎಂಬ ಪ್ರಶ್ನೆ ಎತ್ತಿದರು. ಆದರೆ, ಕೋರ್ಟ್ ಈ ವಾದವನ್ನು ಅಂಗೀಕರಿಸದೆ, ಟಿಡಿಆರ್ ನೀಡುವಂತೆ ಅಂತಿಮವಾಗಿ ಆದೇಶಿಸಿದೆ.