back to top
21.1 C
Bengaluru
Monday, October 27, 2025
HomeKarnatakaParameshwar ಖಡಕ್ ಮಾತು: ಸಭೆ ಮುಂದೂಡಿಕೆಗೆ ಸ್ಪಷ್ಟನೆ

Parameshwar ಖಡಕ್ ಮಾತು: ಸಭೆ ಮುಂದೂಡಿಕೆಗೆ ಸ್ಪಷ್ಟನೆ

- Advertisement -
- Advertisement -

Bengaluru: ಡಿನ್ನರ್ ಸಭೆ ಮುಂದೂಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಬಳಿಕ, ಗೃಹ ಸಚಿವ ಡಾ. ಜಿ. ಪರಮೇಶ್ವರ್ (Parameshwar) ಪ್ರತಿಕ್ರಿಯಿಸಿದ್ದು, “ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ” ಎಂದಿದ್ದಾರೆ. “ಸಭೆಯನ್ನು ಕೇವಲ ಮುಂದೂಡಿದ್ದೇವೆ, ಸಭೆ ನಡೆಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.

ಪರಮೇಶ್ವರ್ ಅವರು, ದಲಿತ ಶಾಸಕರು ಮತ್ತು ಸಚಿವರಿಗಾಗಿ ಡಿನ್ನರ್ ಸಭೆ ಆಯೋಜನೆ ಮಾಡುತ್ತಿದ್ದರು. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಸಭೆ ಸೇರಿದ್ದ ಪರಿಣಾಮ, ಪರಮೇಶ್ವರ್ ಡಿನ್ನರ್ ಸಭೆ ನಡೆಸಲು ಮುಂದಾದರು. ಆದರೆ, ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ಗೆ ರಾಜ್ಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಹೈಕಮಾಂಡ್ ಸಭೆಗೆ ತಾತ್ಕಾಲಿಕ ಬ್ರೇಕ್ ಹಾಕಿತು.

ಪರಮೇಶ್ವರ್, “ಹೈಕಮಾಂಡ್ ಬ್ರೇಕ್ ಹಾಕಿದ್ದು ಕೇವಲ ಸಭೆ ಮುಂದೂಡಿಕೆಗೆ. ಔತಣಕೂಟ ರದ್ದು ಮಾಡಿಲ್ಲ. ಸಭೆ ನಡೆಸಲು ತಕ್ಕ ದಿನಾಂಕ ನಿಗದಿ ಮಾಡಿದ ನಂತರ ಮಾಹಿತಿ ನೀಡುತ್ತೇವೆ” ಎಂದರು.

ದೌರ್ಜನ್ಯದ ವಿಷಯದಲ್ಲಿ, “ಯಾರೂ ನಮ್ಮ ಸಭೆ ಸಹಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಸಭೆ ತಡೆಯಲು ಪ್ರಯತ್ನಿಸಿದರೆ ತಕ್ಕ ಉತ್ತರ ಕೊಡಲು ನಾವು ಸಿದ್ಧ” ಎಂದು ಪರಮೇಶ್ವರ್ ಎಚ್ಚರಿಸಿದರು.

ಹೈಕಮಾಂಡ್‌ನಲ್ಲಿ ಡಿಕೆ ಶಿವಕುಮಾರ್ ದೂರು ನೀಡಿದರ ಬಗ್ಗೆ, “ನನಗೆ ಈ ವಿಚಾರದಲ್ಲಿ ಮಾಹಿತಿ ಇಲ್ಲ. ನಾವು ರಾಜಕಾರಣ ಓಪನ್ ಆಗಿಯೇ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದರು.

ಇತ್ತೀಚೆಗಷ್ಟೇ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಸಭೆಯಲ್ಲಿ, ಸಿದ್ದರಾಮಯ್ಯ ಮುಂದಿನ ಸಿಎಂ ಆಗಿ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ. ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗ ಈ ಸಭೆ ನಡೆಯುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

“ಔತಣಕೂಟ ನಮ್ಮ ಸಂಸ್ಕೃತಿಯ ಭಾಗ. ಸಭೆಯ ಬಳಿಕ ಊಟವು ಸಹಜ. ಮುಂದಿನ ದಿನಗಳಲ್ಲಿ ಸಭೆಯ ತೀರ್ಮಾನಗಳು ಎಲ್ಲರಿಗೂ ತಿಳಿಯುತ್ತವೆ” ಎಂದು ಪರಮೇಶ್ವರ್ ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page