Home News ಚೀನಾ ರಕ್ಷಣಾ ಸಚಿವರನ್ನು ಭೇಟಿಯಾದ Rajnath Singh: ಉತ್ತಮ ಸಂಬಂಧಕ್ಕೆ ಒತ್ತು

ಚೀನಾ ರಕ್ಷಣಾ ಸಚಿವರನ್ನು ಭೇಟಿಯಾದ Rajnath Singh: ಉತ್ತಮ ಸಂಬಂಧಕ್ಕೆ ಒತ್ತು

Rajnath Singh meets Chinese Defence Minister

Qingdao (China): ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಶಾಂತಿಯುತವಾಗಿ ಮುಂದುವರಿಸಲು ಮತ್ತು ಹೊಸ ತೊಂದರೆಗಳನ್ನ ತಪ್ಪಿಸಲು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.

ಅವರು ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾನ್ ಜುನ್ ಅವರನ್ನು ಭೇಟಿಯಾಗಿ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಇದ್ದ ಯುದ್ಧಭೀತಿಯ ಪರಿಸ್ಥಿತಿಯನ್ನು ಶಮನಗೊಳಿಸಲು ನವದೆಹಲಿ ಮತ್ತು ಬೀಜಿಂಗ್‌ ನಡುವೆ ಕಳೆದ ಅಕ್ಟೋಬರಿನಲ್ಲಿ ತೀರ್ಮಾನವಾದ ಒಪ್ಪಂದವನ್ನು ಮುಂದುವರೆಸುವ ಬಗ್ಗೆ ಮಾತುಕತೆ ನಡೆಯಿತು.

ಸಾಮಾಜಿಕ ಜಾಲತಾಣದಲ್ಲಿ ಈ ಭೇಟಿಯ ಬಗ್ಗೆ ತಿಳಿಸಿದ ರಾಜನಾಥ್ ಸಿಂಗ್, “ಸಕಾರಾತ್ಮಕ ಮಾತುಕತೆ ಹಾಗೂ ಭವಿಷ್ಯದ ದೃಷ್ಟಿಕೋನ ಹೊಂದಿರುವ ಅಭಿಪ್ರಾಯ ವಿನಿಮಯ ನಡೆದಿದೆ” ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ, ಆರು ವರ್ಷಗಳ ಬಳಿಕ ಮತ್ತೆ ಕೈಲಾಸ ಮಾನಸ ಸರೋವರ ಯಾತ್ರೆ ಆರಂಭವಾಗುತ್ತಿರುವುದನ್ನು ಗಮನಿಸಿ ಸಂತೋಷ ವ್ಯಕ್ತಪಡಿಸಲಾಯಿತು. ಈ ಯಾತ್ರೆ 2020ರಲ್ಲಿ ಕೋವಿಡ್ ಮತ್ತು ಲಡಾಖ್‌ನ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದ ಸ್ಥಗಿತಗೊಂಡಿತ್ತು.

ರಕ್ಷಣಾ ಸಚಿವರ ಭೇಟಿಯ ವೇಳೆ ರಾಜನಾಥ್ ಸಿಂಗ್ ಅವರು ಚೀನಾ ರಕ್ಷಣಾ ಸಚಿವರಿಗೆ ಮಧುಬನಿ ಶೈಲಿಯ “ಟ್ರೀ ಆಫ್ ಲೈಫ್” ಚಿತ್ರವನ್ನು ಉಡುಗೊರೆಯಾಗಿ ನೀಡಿದರು, ಇದು ಬುದ್ಧಿವಂತಿಕೆ ಮತ್ತು ಶಾಂತಿಯ ಪ್ರತಿಕವಾಗಿದೆ.

“ಭಾರತವು ಚೀನಾದೊಂದಿಗೆ ಸಂಘರ್ಷ ಬಯಸುವುದಿಲ್ಲ. ಬದಲಾಗಿ, ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಿ, ಪರಸ್ಪರ ನಂಬಿಕೆಯನ್ನು ಬಲಪಡಿಸಲು ನಾವು ಸಿದ್ಧ” ಎಂದು ಸಿಂಗ್ ಸ್ಪಷ್ಟಪಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version