
Ramanagaram: ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ (Ricky Rai) ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ರಾಮನಗರದ ಬಿಡದಿ ಬಳಿ ನಡೆದಿದೆ. ರಾತ್ರಿ 11:30ರ ಸುಮಾರಿಗೆ ಈ ದಾಳಿ ನಡೆದಿದೆ.
ರಿಕ್ಕಿ ರೈ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸಾಮಾನ್ಯವಾಗಿ ತಾವೇ ಕಾರು ಓಡಿಸುತ್ತಿದ್ದ ಅವರು, ಈ ಬಾರಿ ಡ್ರೈವರ್ಗೆ ವಾಹನ ಚಲಾಯಿಸಲು ಕೊಟ್ಟಿದ್ದು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈ ಮೂಗು ಮತ್ತು ಕೈಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ವಿವರಗಳು
- ದಾಳಿ ರಿಕ್ಕಿ ರೈ ಮನೆ ಸಮೀಪವೇ ನಡೆದಿದ್ದು, ದುಷ್ಕರ್ಮಿ ಕಾಂಪೌಂಡ್ನಲ್ಲಿ ಲುಕ್ ಆಗಿ ಶಾಟ್ಗನ್ ಬಳಸಿ 70mm ಬೌಲಟ್ಗಳಿಂದ ಫೈರಿಂಗ್ ಮಾಡಿದ್ದಾರೆ.
- ಕಾರಿನ ಡೋರ್ ಹಾಗೂ ಸೀಟುಗಳಿಗೆ ಗುಂಡು ತಾಗಿದ್ದು, ರಿಕ್ಕಿ ರೈ ಮತ್ತು ಚಾಲಕನಿಗೆ ಗಾಯವಾಗಿದೆ.
- ಈ ಘಟನೆಯು ಪೂರ್ವ ಯೋಜಿತ ಸಂಚು ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ದುಷ್ಕರ್ಮಿ ಶಾರ್ಪ್ ಶೂಟರ್ ಆಗಿದ್ದ ಸಾಧ್ಯತೆ ಇದೆ.
- ಸ್ಥಳದಿಂದ ಎರಡು ಗುಂಡುಗಳು ಹಾಗೂ ಒಂದು ಮೊಬೈಲ್ ಪೋನ್ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.