back to top
25.7 C
Bengaluru
Thursday, July 31, 2025
HomeKarnatakaSC/ST ಯೋಜನೆಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಮತ್ತೆ ವಿವಾದಕ್ಕೆ Government

SC/ST ಯೋಜನೆಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಮತ್ತೆ ವಿವಾದಕ್ಕೆ Government

- Advertisement -
- Advertisement -

Bengaluru: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರ (ST) ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಮತ್ತೆ ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ.

ಎಸ್‌ಸಿ/ಎಸ್‌ಟಿ ಜನರಿಗೆ ಮಾತ್ರ ಮೀಸಲಾದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಗಳ ಹಣವನ್ನು ಇತರ ಉಚಿತ ಯೋಜನೆಗಳಿಗೆ ಬಳಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳಡಿಯಲ್ಲಿ 2025-26ಕ್ಕೆ ಒಟ್ಟು 42,017 ಕೋಟಿ ರೂಪಾಯಿ ಅನುದಾನವಿದೆ. ಈ ಪೈಕಿ 11,896 ಕೋಟಿ ರೂಪಾಯಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲು ಚಿಂತನೆ ನಡೆಯುತ್ತಿದೆ.

ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗವಾಗುವ ಹಣ ಇಂತಿದೆ

  • ಯುವನಿಧಿ – ₹162 ಕೋಟಿ
  • ಗೃಹಲಕ್ಷ್ಮೀ – ₹7,438 ಕೋಟಿ
  • ಗೃಹಜ್ಯೋತಿ – ₹2,626 ಕೋಟಿ
  • ಶಕ್ತಿ – ₹1,537 ಕೋಟಿ
  • ಅನ್ನಭಾಗ್ಯ – ₹1,670 ಕೋಟಿ

ಹೀಗಾಗಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಇತರ ಯೋಜನೆಗಳಿಗೆ ಬಳಕೆ ಮಾಡುವ ಈ ನಿರ್ಧಾರವು, ಕಳೆದ ವರ್ಷಕ್ಕೂ ಮುಂಚೆಯೇ ಟೀಕೆ ಎದುರಿಸಿದ್ದಲ್ಲದೆ, ಈ ಬಾರಿ ಮತ್ತೆ ದಲಿತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಅಧಿವೇಶನದಲ್ಲಿಯೂ ಇದೇ ವಿಷಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದ ನಡೆದಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page