Gandhinagar: “ನಾನು ಇನ್ನೂ ದೊಡ್ಡದ್ದೇನೂ ಮಾಡಿಲ್ಲ, ಆದರೆ ಪಾಕಿಸ್ತಾನ ಈಗಿನಿಂದಲೇ ಭಯಪಡುತ್ತಿದೆ. ಹಾಗಾದರೆ ಮುಂದೆ ಏನಾಗಬಹುದು?” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ಮಾತನಾಡಿದ ಅವರು, “ನಾನು ಪಾಕಿಸ್ತಾನಕ್ಕೆ ಹೋಗುವ ನದಿಯ ನೀರನ್ನು ನಿಲ್ಲಿಸಿ, ಅದರ ಅಣೆಕಟ್ಟನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಆದರೂ ಪಾಕಿಸ್ತಾನದಲ್ಲಿ ಗಾಬರಿಯಾಗುತ್ತಿದೆ” ಎಂದರು.
ಭಾರತ ವಿಭಜನೆಯ ಬಗ್ಗೆ ಮಾತನಾಡಿದ ಮೋದಿ, “1947ರಲ್ಲಿ ದೇಶವನ್ನು ವಿಭಜಿಸಿದಾಗ ಸರಪಳಿಗಳನ್ನು ಕತ್ತರಿಸುವ ಬದಲು ನಮ್ಮ ಕೈ-ಕಾಲುಗಳನ್ನು ಕತ್ತರಿಸಲಾಯಿತು. ಅದೇ ರಾತ್ರಿ ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾಯಿತು” ಎಂದು ಹೇಳಿದರು.
ಆರ್ಥಿಕ ಬೆಳವಣಿಗೆ ಬಗ್ಗೆ ಅವರು ಹೇಳಿದರು: “2047ರೊಳಗೆ ಭಾರತವನ್ನು ಶಕ್ತಿಶಾಲಿಯಾದ ರಾಷ್ಟ್ರವನ್ನಾಗಿ ಮಾಡಬೇಕು. ಈಗಿನಿಂದಲೇ ನಮ್ಮನ್ನು ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯಿದೆ. ನಾವು ವಿದೇಶಿ ವಸ್ತುಗಳನ್ನು ನಂಬದೇ, ನಮ್ಮದೇ ಆದ ವಸ್ತುಗಳನ್ನು ಬಳಸಿ ಮುಂದುವರೆಯಬೇಕು.”
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಮೋದಿ, “ನೀವು ಆರಾಮಾಗಿ ಕುಳಿತಿದ್ದರೆ ಸರಿ, ಇಲ್ಲವಾದರೆ ನಮ್ಮ ಗುಂಡೇಟನ್ನು ಎದುರಿಸಬೇಕಾಗುತ್ತದೆ” ಎಂದರು.
ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಿದ ಅವರು, “ಪ್ರತಿ ಹಳ್ಳಿಯ ವ್ಯಾಪಾರಿಯು ವಿದೇಶಿ ವಸ್ತುಗಳನ್ನು ಮಾರದೆ ಇರಬೇಕು ಎಂದು ಪ್ರತಿಜ್ಞೆ ಮಾಡಬೇಕು. ದೀರ್ಘಕಾಲದ ದೃಷ್ಟಿಕೋಣದಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ” ಎಂದರು.
ಭಾರತದ ಶಾಂತಿ ತತ್ವ ಕುರಿತು, “ಭಾರತವು ‘ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ನಂಬಿಕೆ ಇಡುತ್ತದೆ. ನಮ್ಮ ನೆರೆಹೊರೆಯವರು ಶಾಂತಿಯುತವಾಗಿರಲಿ ಎಂಬುದೇ ನಮ್ಮ ಆಶಯ” ಎಂದು ಹೇಳಿದರು.
ಸಿಂಧೂ ಜಲ ಒಪ್ಪಂದ ಕುರಿತು, “1960ರಲ್ಲಿ ಸಹಿ ಹಾಕಿದ ಒಪ್ಪಂದದ ಪ್ರಕಾರ, ಜಮ್ಮು-ಕಾಶ್ಮೀರದ ನದಿಗಳನ್ನು ಶುದ್ಧಗೊಳಿಸದಂತೆ ನಿರ್ಧರಿಸಲಾಗಿತ್ತು. ಇದರ ಪರಿಣಾಮವಾಗಿ, 60 ವರ್ಷಗಳಿಂದ ಜನರಿಗೆ ನ್ಯಾಯಯುತವಾಗಿ ನೀರು ಸಿಗುತ್ತಿಲ್ಲ” ಎಂದು ಹೇಳಿದರು.
ಆಪರೇಷನ್ ಸಿಂಧೂರ್ ಕುರಿತು, “22 ನಿಮಿಷಗಳಲ್ಲಿ 9 ಉಗ್ರರ ತಾಣಗಳನ್ನು ನಾಶ ಮಾಡಲಾಗಿದೆ. ಈ ಕಾರ್ಯಾಚರಣೆ ಕ್ಯಾಮೆರಾ ಮುಂದೆ ನಡೆದಿದ್ದು, ಇದಕ್ಕೆ ಪುರಾವೆ ಬೇಕೆಂಬ ಪ್ರಶ್ನೆ ಉದಯವಾಗುವುದಿಲ್ಲ” ಎಂದು ಹೇಳಿದರು.