back to top
24.1 C
Bengaluru
Saturday, October 11, 2025
HomeKarnatakaಸಿದ್ದರಾಮಯ್ಯ 13ಕ್ಕೆ ಆಪ್ತ ಸಚಿವರೊಂದಿಗೆ ಔತಣಕೂಟ: ಸಂಪುಟ ಪುನಾರಚನೆ ಬಗ್ಗೆ ಚರ್ಚೆ

ಸಿದ್ದರಾಮಯ್ಯ 13ಕ್ಕೆ ಆಪ್ತ ಸಚಿವರೊಂದಿಗೆ ಔತಣಕೂಟ: ಸಂಪುಟ ಪುನಾರಚನೆ ಬಗ್ಗೆ ಚರ್ಚೆ

- Advertisement -
- Advertisement -

Bengaluru: ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 13ಕ್ಕೆ ತಮ್ಮ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಅಪರೂಪದ ಆಹ್ವಾನ ಕೆಲವರಿಗೆ ಆಶ್ಚರ್ಯಕರವಾಗಿದೆ. ಕಾಂಗ್ರೆಸ್ ಳಗೆ “ಯಾರ ಕುರ್ಚಿ ಉಳಿಯುತ್ತದೆ, ಯಾರ ಕುರ್ಚಿ ಹೋಗಬಹುದು” ಎಂಬ ಚರ್ಚೆಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಸಂಭವನೀಯ ಸಂಪುಟ ಪುನಾರಚನೆಯ ವಿಚಾರವೂ ಪಕ್ಷದಲ್ಲಿ ಚರ್ಚೆಯ ವಿಷಯವಾಗಿದೆ.

ಮುಂದಿನ ಡಿನ್ನರ್ ಸಭೆಗೆ ಸಿದ್ದರಾಮಯ್ಯ ಮುನ್ನಡೆಸಿದ ಸುಮಾರು 2 ಗಂಟೆಗಳ ಸಭೆಯಲ್ಲಿ ಅತ್ಯಾಪ್ತ ಸಚಿವರ ಜೊತೆ ರಾಜ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ,

  • ನಾಯಕತ್ವ ಬದಲಾವಣೆಗೆ ಪ್ರತಿತಂತ್ರಗಳ ಬಗ್ಗೆ ಚರ್ಚೆ
  • ಸರ್ಕಾರ ನಿರ್ವಹಣೆ ಮತ್ತು ಕ್ಷಿಪ್ರ ಬೆಳವಣಿಗೆಗೆ ತಂತ್ರಗಳ ವಿಚಾರ
  • ರಾಜಕೀಯ ಎದುರಾಳಿಗಳ ಕಾರ್ಯಚಟುವಟಿಕೆಗಳಿಗೆ ಪ್ರತಿತಂತ್ರ ಹೇಗೆ ಹಿಡಿಯಬೇಕು ಎಂಬ ಚರ್ಚೆ
  • ಸಂಪುಟ ವಿಸ್ತರಣೆ, ಲಾಭ-ನಷ್ಟ ಹಾಗೂ ಶಾಸಕರ ನಿರ್ವಹಣೆ ವಿಚಾರಗಳನ್ನು ಸಮಾಲೋಚನೆ

ಈ ಸಭೆಯ ಮೂಲಕ ಸಿದ್ದರಾಮಯ್ಯ ಪಕ್ಷದ ಮಂತ್ರಿಗಳು ಮತ್ತು ಶಾಸಕರನ್ನು ಸೆಳೆದುಕೊಂಡು, ಸಂಪುಟ ಪುನಾರಚನೆ ವೇಳೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page