Home Karnataka Hassan ಹಾಸನದಲ್ಲಿ Siddaramaiah ಶಕ್ತಿ ಪ್ರದರ್ಶನ

ಹಾಸನದಲ್ಲಿ Siddaramaiah ಶಕ್ತಿ ಪ್ರದರ್ಶನ

CM Siddaramaiah Rain Damace Meeting

Hassan: ಉಪಚುನಾವಣೆಯ ನಂತರ ರಾಜಕೀಯ ಸಮತೋಲನ ಸೃಷ್ಟಿಯಾಗಿದೆ ಎಂದುಕೊಂಡಿದ್ದ ಕಾಂಗ್ರೆಸ್ (Congress) ಪಾಳಯದಲ್ಲಿ ಮತ್ತೆ ಭಿನ್ನಮತಗಳ ಚರ್ಚೆ ಶುರುವಾಗಿದೆ. ಹಾಸನದಲ್ಲಿ CM ಸಿದ್ದರಾಮಯ್ಯ (Siddaramaiah) ಅಭಿಮಾನಿಗಳ ಸಮಾವೇಶ ಆಯೋಜನೆಯಾಗಿದ್ದು, ಇದಕ್ಕೆ ಪಕ್ಷದೊಳಗೇ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿದ್ಧರಾಮಯ್ಯ ಅಭಿಮಾನಿಗಳು ಹಾಸನದಲ್ಲಿ ಭರ್ಜರಿ ಸಮಾವೇಶಕ್ಕೆ ಸಜ್ಜಾಗಿದ್ದು, ಸುಮಾರು 1 ಲಕ್ಷ ಜನರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನ ನಡೆಸಲು ಸಿದ್ದರಾಗಿದ್ದಾರೆ. ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮತ್ತು ಇತರ ಜಿಲ್ಲೆಗಳಿಂದ ಜನರ ಹಾಜರಾತಿ ನಿರೀಕ್ಷಿಸಲಾಗುತ್ತಿದೆ.

ಸಮಾವೇಶದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ಒಂದು ಪತ್ರ ಬರೆದಿದ್ದು, ಈ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪತ್ರದ ವಿಷಯ

  • ಸಮಾವೇಶವನ್ನು ಪಕ್ಷದ ವೇದಿಕೆಯಿಂದ ಹೊರಗಡೆ ನಡೆಸಲಾಗುತ್ತಿದೆ.
  • ಕಾರ್ಯಕ್ರಮದ ಉದ್ದೇಶ ವೈಯಕ್ತಿಕ ಶಕ್ತಿ ಪ್ರದರ್ಶನ ಎಂದು ಆರೋಪಿಸಲಾಗಿದೆ.
  • ಪಕ್ಷದ ಚಿಹ್ನೆ ಬಳಸದಿರುವ ಬಗ್ಗೆ ಪ್ರಶ್ನೆ ಮೂಡಿಸಲಾಗಿದೆ.
  • ಇಂತಹ ಕಾರ್ಯಕ್ರಮಗಳು ಪಕ್ಷದ ಭವಿಷ್ಯವನ್ನು ಹಾನಿ ಮಾಡಬಹುದು ಎಂದು ಎಚ್ಚರಿಸಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್, ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ಸಮಾವೇಶದ ಮಾಹಿತಿ ನನಗೆ ಇದೆ, ಆದರೆ, ಪತ್ರದ ವಿಷಯ ತಿಳಿದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಡಿಸೆಂಬರ್ 5ರಂದು ಹಾಸನದಲ್ಲಿ ನಡೆಯುವ ಈ ಸಮಾವೇಶ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತಗಳನ್ನು ಬಯಲು ಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಬಹುದು ಎಂಬುದು ಕುತೂಹಲ ಕೆರಳಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version