HomeIndiaತ್ರಿಭಾಷಾ ಸೂತ್ರ, ಕ್ಷೇತ್ರ ಮರುವಿಂಗಡನೆ ಕುರಿತು Stalin ಗೆ Stalin ತಿರುಗೇಟು

ತ್ರಿಭಾಷಾ ಸೂತ್ರ, ಕ್ಷೇತ್ರ ಮರುವಿಂಗಡನೆ ಕುರಿತು Stalin ಗೆ Stalin ತಿರುಗೇಟು

- Advertisement -
- Advertisement -

Chennai: ತ್ರಿಭಾಷಾ ಸೂತ್ರ (three-language formula) ಮತ್ತು ಕ್ಷೇತ್ರ ಮರುವಿಂಗಡನೆ ಕುರಿತಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಕ್ಕೆ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್, ತಮಿಳುನಾಡಿನ ದ್ವಿಭಾಷಾ ನೀತಿ ಮತ್ತು ನ್ಯಾಯಯುತ ಕ್ಷೇತ್ರ ಮರುವಿಂಗಡನೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ಸ್ಟಾಲಿನ್ ಮುಂದುವರಿದು, ಯೋಗಿ ಅವರ ಹೇಳಿಕೆ ರಾಜಕೀಯ ಹಾಸ್ಯಾಸ್ಪದ (ಬ್ಲ್ಯಾಕ್ ಕಾಮಿಡಿ). ತಮಿಳುನಾಡು ಭಾಷಾ ಹೇರಿಕೆ ಮತ್ತು ಜನಾಂಗೀಯ ಭೇದಾಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುತ್ತದೆ, ಆದರೆ ಯಾವುದೇ ನಿರ್ದಿಷ್ಟ ಭಾಷೆಯನ್ನು ವಿರೋಧಿಸುವುದಿಲ್ಲ. ಇದು ನ್ಯಾಯ ಮತ್ತು ಘನತೆಯ ಪ್ರಶ್ನೆ ಎಂದು ಹೇಳಿದ್ದಾರೆ.

ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡನೆ ಮತ್ತು ದ್ವಿಭಾಷಾ ನೀತಿಯ ಪರವಾಗಿ ತಮಿಳುನಾಡು ಗಟ್ಟಿಯಾಗಿ ನಿಲುಕೊಂಡಿದೆ, ಇದು ಬಿಜೆಪಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಇದು ಸ್ಪಷ್ಟವಾಗುತ್ತಿದೆ ಎಂದು ಸ್ಟಾಲಿನ್ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್, ಸ್ಟಾಲಿನ್ ಅವರು ಮತಬ್ಯಾಂಕ್ ಕಾಪಾಡಿಕೊಳ್ಳಲು ಪ್ರದೇಶ ಮತ್ತು ಭಾಷೆ ಆಧಾರದಲ್ಲಿ ವಿಭಜನಾ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮಿಳು ಪ್ರಾಚೀನ ಮತ್ತು ಶ್ರೀಮಂತ ಭಾಷೆ, ಅದು ವಿಭಜಿಸುವುದಲ್ಲ, ಜನರನ್ನು ಒಗ್ಗೂಡಿಸುತ್ತದೆ ಎಂದೂ ಹೇಳಿದ್ದರು.

ನವೀನ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಲು ಕೇಂದ್ರ ಮುಂದಾಗಿದೆ. ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ನಡುವೆ ಪರಸ್ಪರ ಗುದ್ದಾಟ ಉಂಟಾಗಿದೆ.

ಕ್ಷೇತ್ರ ಮರುವಿಂಗಡನೆಯನ್ನೂ ಬಿಜೆಪಿ ರಾಜಕೀಯ ಅಜೆಂಡಾ ಎಂದು ಸ್ಟಾಲಿನ್ ಕರೆದಿದ್ದಾರೆ ಮತ್ತು ನ್ಯಾಯಸಮ್ಮತ ಮರುವಿಂಗಡನೆಗಾಗಿ ಆಗ್ರಹಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!