back to top
15 C
Bengaluru
Tuesday, February 4, 2025
HomeIndiaNew Delhiಪ್ರಧಾನಿ ಭದ್ರತಾ ಲೋಪ ತನಿಖೆಗೆ Supreme Court ನಿಂದ ಸಮಿತಿ

ಪ್ರಧಾನಿ ಭದ್ರತಾ ಲೋಪ ತನಿಖೆಗೆ Supreme Court ನಿಂದ ಸಮಿತಿ

- Advertisement -
- Advertisement -

New Delhi : ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Prime Minister Narendra Modi) ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಪ್ರಕರಣ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್​ನ (Supreme Court of India) ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ (Justice retd. Indu Malhotra) ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

ಜನವರಿ 5 ರ ಪ್ರಧಾನಿ ಮೋದಿ ಪಂಜಾಬ್ (Punjab) ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆಯ ಕಾರಣ ಸುಮಾರು 20 ನಿಮಿಶಗಳ ಕಾಲ ಮೋದಿ ಯವರ ಮೋಟಾರ್ ಕೇಡ್ ಮೇಲ್ಸೇತುವೆಯ ಮೇಲೆ ತಡೆಹಿಡಿಯಲಾಗಿತ್ತು. ಈ ಕುರಿತು ಪಂಜಾಬ್ ಸರ್ಕಾರದಿಂದ ಭದ್ರತಾ ಲೋಪ ನಡೆದಿದೆ ಎಂದು ಬಿಜೆಪಿ ಪ್ರತಿಪಾದಿಸಿತ್ತು.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರು, ಪಂಜಾಬ್‌ನ ಭದ್ರತಾ ಮಹಾನಿರ್ದೇಶಕರು ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಸದಸ್ಯರಾಗಿರಲಿದ್ದಾರೆ.ಈ ಮೊದಲು ಕೇಂದ್ರ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ರಚಿಸಿದ್ದ ತನಿಖಾ ಸಮಿತಿಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿ, ಕೇಂದ್ರ ಸರ್ಕಾರವನ್ನು ತರಾಟೆಗೂ ಕೂಡಾ ತೆಗೆದುಕೊಂಡಿತ್ತು. ಎರಡೂ ಕಡೆ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಸುಪ್ರೀಂಕೋರ್ಟ್​ ತಾನೇ ತನಿಖಾ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page