Bengaluru: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ (Urea fertilizer) ಕೊರತೆಯು ಉಂಟಾಗಿದ್ದು, ಹಲವಾರು ಜಿಲ್ಲೆಗಳ ರೈತರು ಆಕ್ರೋಶಗೊಂಡಿದ್ದಾರೆ. ಕೊಪ್ಪಳ, ಗದಗ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರೈತರು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾಗೆ ಪತ್ರ ಬರೆದು, ರಾಜ್ಯಕ್ಕೆ ಕಡ್ಡಾಯವಾಗಿ ಯೂರಿಯಾ ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರದ ಮುಖ್ಯಾಂಶಗಳು
- ಖಾರಿಫ್ ಹಂಗಾಮಿಗೆ ಕೇಂದ್ರವು ಕರ್ನಾಟಕಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದ್ದು, ಇದರಲ್ಲಿ ಇದುವರೆಗೆ ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ ಪೂರೈಕೆ ಆಗಿದೆ.
- ಏಪ್ರಿಲ್ರಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ.
- ಕೆಲ ಕಂಪನಿಗಳು ಯೂರಿಯಾ ಪೂರೈಕೆ ಮಾಡಲು ಅಸಾಧ್ಯತೆ ತೋರುತ್ತಿವೆ.
- ಮಳೆಯು ಆರಂಭವಾಗಿರುವುದರಿಂದ ಬಿತ್ತನೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.
- ಮೆಕ್ಕೆಜೋಳದ ವಿಸ್ತೀರ್ಣ 2 ಲಕ್ಷ ಹೆಕ್ಟೇರಿನಿಂದ ಹೆಚ್ಚಾಗಿದೆ.
- 13,000 ಹೆಕ್ಟೇರಿನಲ್ಲಿ ಖಾರಿಫ್ ಮುಂಚಿನ ಬಿತ್ತನೆ ಆಗಿದೆ.
ರಸ್ತೆ ತಡೆ ಮತ್ತು ಪ್ರತಿಭಟನೆ
- ಕೊಪ್ಪಳದ ಬೇವೂರಿನಲ್ಲಿ ರೈತರು ಯೂರಿಯಾ ಗೊಬ್ಬರ ವಿತರಣೆಗೆ ಆಗ್ರಹಿಸಿ ರಸ್ತೆ ತಡೆ ಮಾಡಿದ್ದಾರೆ.
- ಗದಗದಲ್ಲಿಯೂ ರೈತರು ಗೋದಾಮು ಮುಂದೆ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ.
- ಕೆಲವರಿಗೆ ಮಾತ್ರ ಟೋಕನ್ ನೀಡಲಾಗುತ್ತಿದ್ದು, ಗೊಬ್ಬರದ ಲಂಚದ ಆರೋಪಗಳೂ ಕೇಳಿಬಂದಿವೆ.
- ಸರಕಾರ ಸಮರ್ಪಕವಾಗಿ ಗೊಬ್ಬರ ವಿತರಿಸಬೇಕು ಎಂಬುದು ರೈತರ ಒತ್ತಾಯ.








