Home News Yediyurappa ಪುತ್ರ ವ್ಯಾಮೋಹದಿಂದ BJP ಸೋಲು: Yatnal ವಾಗ್ದಾಳಿ

Yediyurappa ಪುತ್ರ ವ್ಯಾಮೋಹದಿಂದ BJP ಸೋಲು: Yatnal ವಾಗ್ದಾಳಿ

Basangouda Patil Yatnal

ಯಡಿಯೂರಪ್ಪ (Yediyurappa) ಮತ್ತು ಅವರ ಪುತ್ರ ವ್ಯಾಮೋಹದ ಕಾರಣದಿಂದ BJP ಉಪಚುನಾವಣೆಗಳಲ್ಲಿ ಸೋತಿದೆ ಎಂದು BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil Yatnal) ಆರೋಪಿಸಿದ್ದಾರೆ. ಅವರು ಹೈಕಮಾಂಡ್ ಈ ಬಗ್ಗೆ ತಕ್ಷಣ ಚರ್ಚೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಕಬ್ಬೂರು ಗ್ರಾಮದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಯತ್ನಾಳ್, “ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಪ್ರವೃತ್ತಿಯಿಂದ ಪಕ್ಷಕ್ಕೆ ನಷ್ಟವಾಗುತ್ತಿದೆ. ಹೈಕಮಾಂಡ್ ಗಂಭೀರ ಚರ್ಚೆ ನಡೆಸಿ, ಸರಿಯಾದ ವ್ಯಕ್ತಿಗಳನ್ನು ಪಕ್ಷದ ಕಾರ್ಯದಲ್ಲಿ ನಿಯೋಜಿಸಬೇಕು,” ಎಂದು ಹೇಳಿದರು.

ಯತ್ನಾಳ್, “ವಿಜಯೇಂದ್ರ ನಾಯಕತ್ವವನ್ನು ಜನ ತಿರಸ್ಕರಿಸಿದ್ದಾರೆ. ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಹರಿಹಾಯ್ದರು.

ಭರತ ಬೊಮ್ಮಾಯಿಯ ಸೋಲು ಆಘಾತಕಾರಿಯಾಗಿದೆ. ಜನರು ರೌಡಿಯನ್ನು ಆಯ್ಕೆ ಮಾಡಿರುವುದು ಬೇಸರಕಾರಿಯಾಗಿದೆ. ಇದು ರಾಜ್ಯದ ನಾಯಕತ್ವ ಬದಲಾವಣೆಯ ಅಗತ್ಯವಿರುವುದನ್ನು ತೋರಿಸುತ್ತದೆ. ರಾಜ್ಯದ ಬಿಜೆಪಿಗೆ ಹೊಸ ಮುಖಗಳು ಬೇಕಾಗಿವೆ ಎಂದು ಅಭಿಪ್ರಾಯಪಟ್ಟರು.

ನಿಖಿಲ್ ಕುಮಾರಸ್ವಾಮಿ ಸೋಲು ದುರಾದೃಷ್ಟಕರ. ಯೋಗೇಶ್ವರ ಅವರಿಗೆ ಟಿಕೆಟ್ ನೀಡಬೇಕು ಎಂದು ನಾನು ಮುಂಚೆಯೇ ಹೇಳಿದ್ದೆ. ಅವರು ನಿಷ್ಕಪಟವಾಗಿ ಕಾರ್ಯ ನಿರ್ವಹಿಸಿದ್ದು ಜನ ಮೆಚ್ಚಿದ್ದಾರೆ. ಜೆಡಿಎಸ್ ಈಗಲಾದರೂ ಸಂಘಟನೆಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ವಕ್ಫ್ ಹೋರಾಟವನ್ನು ಪ್ರತಿಯೊಂದು ಜಿಲ್ಲೆಯಲ್ಲಿ ಜಾಗೃತಗೊಳಿಸಲಾಗುವುದು. “ಕಾಂಗ್ರೆಸ್ ಗೆದ್ದರೆ ರೈತರ ಜಮೀನುಗಳಿಗೂ ಅಪಾಯ,” ಎಂದ ಅವರು, ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ವಿರುದ್ಧ ಹೈಕಮಾಂಡ್ ಬಳಿ ದೂರು ನೀಡಲಾಗುವುದು ಎಂದು ಹೇಳಿದರು.

ಬಿಜೆಪಿಯ ಹೈಕಮಾಂಡ್ ಕಣ್ಣು ತೆರೆದು ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version