back to top
25.2 C
Bengaluru
Friday, July 18, 2025
HomeBusinessಗೋಧಿ ಖರೀದಿ ಕುರಿತುYogi and Joshi ಸಮಾಲೋಚನೆ

ಗೋಧಿ ಖರೀದಿ ಕುರಿತುYogi and Joshi ಸಮಾಲೋಚನೆ

- Advertisement -
- Advertisement -

Lucknow: ಗೋಧಿ ಖರೀದಿ ಬಗ್ಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi and Joshi) ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳ ಕುರಿತು ಚರ್ಚೆ ಕೂಡ ನಡೆಯಿತು.

ಉತ್ತರ ಪ್ರದೇಶ ಸರ್ಕಾರ ಏಪ್ರಿಲ್ ಮೊದಲ ವಾರದಲ್ಲಿ 1 ಲಕ್ಷ ಟನ್ ಗೋಧಿ ಖರೀದಿಸಿದೆ. 5,780 ಖರೀದಿ ಕೇಂದ್ರಗಳಲ್ಲಿ ಸುಮಾರು 20,409 ರೈತರು ಗೋಧಿ ಮಾರಾಟ ಮಾಡಿದ್ದಾರೆ. ನೋಂದಾಯಿತ ರೈತರು ಪರೀಕ್ಷೆಯಿಲ್ಲದೇ 100 ಕ್ವಿಂಟಾಲ್ ವರೆಗೆ ಗೋಧಿ ಮಾರಾಟ ಮಾಡಬಹುದು. ಮುಖ್ಯಮಂತ್ರಿ ಆದೇಶದಂತೆ ರಜಾದಿನಗಳಲ್ಲಿಯೂ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಪಿಎಂ ಕುಸುಮ್ ಯೋಜನೆ 2019ರಲ್ಲಿ ಪ್ರಾರಂಭವಾಯಿತು. ಇದು ಕೃಷಿಯಲ್ಲಿ ಸೌರ ಶಕ್ತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ರೈತರಿಗೆ ಸೌರ ಪಂಪುಗಳು ಹಾಗೂ ವಿದ್ಯುತ್ ಸ್ಥಾವರಗಳಿಗಾಗಿ ಆರ್ಥಿಕ ನೆರವು ನೀಡುತ್ತದೆ.

ಪಿಎಂ ಸೂರ್ಯ ಘರ್ ಯೋಜನೆ ಮನೆಗಳಲ್ಲಿ ಸೌರಶಕ್ತಿ ಬಳಕೆ ಹೆಚ್ಚಿಸಲು ಮತ್ತು ಉಚಿತ ವಿದ್ಯುತ್ ಒದಗಿಸಲು ರೂಪುಗೊಂಡ ಯೋಜನೆಯಾಗಿದೆ.

ಇದೇ ವೇಳೆ, ಏಪ್ರಿಲ್ 9ರಂದು ಯೋಗಿ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು 53% ರಿಂದ 55% ಕ್ಕೆ ಹೆಚ್ಚಿಸಿದೆ. ಈ ತಿದ್ದುಪಡಿ ಜನವರಿ 1, 2025ರಿಂದ ಜಾರಿಗೆ ಬರಲಿದೆ ಮತ್ತು 16 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಮುಖ್ಯಮಂತ್ರಿ ಯೋಗಿ ಅವರು, “ನೌಕರರ ಹಿತಾಸಕ್ತಿಗಳು ಸರ್ಕಾರದ ಮೊದಲ ಆದ್ಯತೆ” ಎಂದು ತಿಳಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page