ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ ಜಮ್ಮು ಮತ್ತು ಕಾಶ್ಮೀರ (Jammu and Kashmir) ಸರ್ಕಾರ 48 ಪ್ರಮುಖ ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧಾರ ತೆಗೆದುಕೊಂಡಿದೆ.
ಮುಚ್ಚಲಾದ ಪ್ರಮುಖ ತಾಣಗಳು
- ಯೂಸ್ಮಾರ್ಗ್
- ತೌಸಾ ಮೈದಾನ
- ದೂದ್ಪತ್ರಿ
- ಬಂಗುಸ್
- ಕರಿವಾನ್ ಡೈವರ್ ಚಂಡಿಗಮ್
- ಅಹರ್ಬಲ್
- ಕೌಸರ್ನಾಗ್
- ವುಲರ್/ವಾಟ್ಲಾಬ್
- ರಾಮ್ಪೋರಾ ಬಂಗುಸ್ ವ್ಯಾಲಿ
- ರಾಜ್ಪೋರಾ
- ಚೀರ್ಹಾರ್
ಇನ್ನೂ ತೆರೆದಿರುವ ತಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಒಂದು ವಾರದ ಹಿಂದೆ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ‘ಲಷ್ಕರ್-ಎ-ತೊಯ್ಬಾ’ ಸಂಘಟನೆಯ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಹೊಣೆ ಹೊತ್ತಿದೆ. ಆದರೆ ನಂತರ ತಮ್ಮ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಸತ್ಯ ತಪ್ಪಿಸಲು ಅವರು ಯತ್ನಿಸಿದರು.
ಪ್ರವಾಸಿಗರ ಸಂಖ್ಯೆ ಇಳಿಕೆ: ಪಹಲ್ಗಾಮ್ ದಾಳಿಯ ನಂತರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆ.
- ಏಪ್ರಿಲ್ 23 ರಂದು: 17,653 ಪ್ರಯಾಣಿಕರು (6,561 ಆಗಮನ, 11,092 ನಿರ್ಗಮನ)
- ಏಪ್ರಿಲ್ 24 ರಂದು: 15,836 ಪ್ರಯಾಣಿಕರು (4,456 ಆಗಮನ, 11,380 ನಿರ್ಗಮನ)
ಭದ್ರತಾ ಕ್ರಮಗಳು: ಭಯೋತ್ಪಾದಕರ ವಿರುದ್ಧ ಬೃಹತ್ ನಿರೋಧನಾ ಕಾರ್ಯಾಚರಣೆ ನಡೆಯುತ್ತಿದೆ. ಶಂಕಿತ ವ್ಯಕ್ತಿಗಳನ್ನು ಹಾಗೂ ಭಯೋತ್ಪಾದಕರಿಗೆ ನೆರವಾದವರನ್ನು ಬಂಧಿಸಲಾಗಿದೆ.