Guwahati: ಅಸ್ಸಾಂ ರಾಜ್ಯದಲ್ಲಿ ಪ್ರವಾಹ (Assam flood) ತೀವ್ರವಾಗಿದ್ದು, 21 ಜಿಲ್ಲೆಗಳಲ್ಲಿ 6.33 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಕ್ಯಾಚರ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದ್ದಾರೆ.
ಭೂಕುಸಿತ ಮತ್ತು ಪ್ರವಾಹದಿಂದ ಹದಗೆಡಿದ ಪ್ರದೇಶಗಳಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ 1,506 ಹಳ್ಳಿಗಳು ಹಾಗೂ 14,700 ಹಕ್ಟೇರ್ ಕೃಷಿ ಭೂಮಿ ಮುಳುಗಿದೆ.
ಹಾನಿಯಾದ ಜಿಲ್ಲೆಗಳು
- ಶ್ರೀಭೂಮಿ: 2,31,536 ಜನರು ಪ್ರಭಾವಿತರಾಗಿ ಭಾರಿ ಹಾನಿ
- ನಾಗಾಂ: 99,819 ಜನರು ಮಳೆ ಪರಿಣಾಮ ಬಾಧಿತರಾಗಿದ್ದು
- ಕ್ಯಾಚರ್: 89,344 ಜನರು ತೀವ್ರ ಹಾನಿ ಅನುಭವಿಸಿದ್ದಾರೆ
ಉಕ್ಕಿ ಹರಿಯುತ್ತಿರುವ ನದಿಗಳು: ಬ್ರಹ್ಮಪುತ್ರ (ನಿಮತಿಘಾಟ್, ತೇಜ್ಪುರ), ಬುರ್ಹಿದಿಹಿಂಗ್ (ಖೋವಾಂಗ್), ಕೊಪಿಲಿ (ಕಂಪೂರ್, ಧರ್ಮತುಲ್), ಬರಾಕ್ (ಫುಲೆರ್ಟಲ್), ರುಕ್ನಿ, ಧಲೇಶ್ವರಿ, ಕುಶಿಯಾರ ನದಿಗಳು ಅಪಾಯದ ಮಟ್ಟ ಮೀರಿವೆ. ನದಿಗಳ ಒಡ್ಡು ಒಡೆದು ರಸ್ತೆ, ಸೇತುವೆ, ಮನೆಗಳು ಹಾನಿಗೊಂಡಿವೆ ಎಂದು ವಿಪತ್ತು ನಿರ್ವಹಣೆ ಸಂಸ್ಥೆ ತಿಳಿಸಿದ್ದಾರೆ.
ರಾಜ್ಯದಲ್ಲಿ 223 ಪರಿಹಾರ ಶಿಬಿರಗಳು ಆರಂಭಗೊಂಡು 39,746 ಜನರಿಗೆ ಆಶ್ರಯ ದೊರೆತಿದೆ. 288 ಆಹಾರ, ನೀರು, ವೈದ್ಯಕೀಯ ನೆರವಿನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಸಂತ್ರಸ್ತರ ರಕ್ಷಣೆಗಾಗಿ ಅಧಿಕಾರಿಗಳು ಮತ್ತು ತಂಡಗಳು ತಕ್ಷಣ ಕಾರ್ಯನಿರ್ವಹಿಸುತ್ತಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. ಪ್ರವಾಹ ನೀರನ್ನು ಕುಡಿಯದೆ ಶುದ್ಧೀಕರಿಸಿದ ನೀರನ್ನು ಮಾತ್ರ ಸೇವಿಸಲು ಸೂಚನೆ ನೀಡಲಾಗಿದೆ. ತುರ್ತು ಸೇವೆಗಳಿಗಾಗಿ ಸ್ಥಳೀಯ ವಿಪತ್ತು ಪ್ರತಿಕ್ರಿಯೆ ಕೇಂದ್ರಗಳಿಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.