ಟೆಲಿಕಾಂ ಕ್ಷೇತ್ರವು (Telecom Sector) ಬಹುಮುಖ್ಯ ಬದಲಾವಣೆಯತ್ತ ಹೆಜ್ಜೆ ಇಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಟೆಲಿಕಾಂ ಜಾಲಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಿವೆ ಎಂದು ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿ ಸಂಜೀವ್ ಬಿದ್ವಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡುತ್ತಾ, 3GPP ಎಂಬ ಜಾಗತಿಕ ಟೆಲಿಕಾಂ ಮಾನದಂಡದಲ್ಲಿ ಎಐ ಮಹತ್ವಪೂರ್ಣ ಪಾತ್ರವಹಿಸುತ್ತಿದೆ ಎಂದು ಹೇಳಿದರು. ಈ ತಂತ್ರಜ್ಞಾನದಿಂದ ಜಾಲಗಳು ಹೆಚ್ಚು ಬುದ್ಧಿವಂತ ಹಾಗೂ ಸ್ವಯಂಚಾಲಿತವಾಗುತ್ತವೆ.
ಭಾರತದ ಎಐ ಪ್ರಗತಿಯ ಕುರಿತು ಮಾತನಾಡಿದ ಅವರು, ‘ಭಾರತ್ ಜೆನ್’ ಎಂಬ ದೇಶೀಯ AI ಭಾಷಾ ಮಾದರಿ, IIT ಮತ್ತು CDOT ನೇತೃತ್ವದ ನವೀನ ಯೋಜನೆಗಳು ದೇಶದ AI ಪ್ರಯತ್ನಗಳಿಗೆ ಉತ್ತಮ ಉದಾಹರಣೆಗಳಾಗಿವೆ ಎಂದರು.
AI ಬಳಸುವಲ್ಲಿ ನೈತಿಕತೆ, ಭದ್ರತೆ ಮತ್ತು ನಿಯಂತ್ರಣ ವ್ಯವಸ್ಥೆಗಳ ಅಗತ್ಯವಿದೆ ಎಂಬುದರತ್ತ ಅವರು ಒತ್ತು ನೀಡಿದರು.
ಈ ಸಭೆಯಲ್ಲಿ ITU ಅಧ್ಯಕ್ಷರು ಹಾಗೂ ಇತರ ಅಂತರರಾಷ್ಟ್ರೀಯ ನಾಯಕರು ಕೂಡ ಭಾಗವಹಿಸಿ, AI ಯುಳ್ಳ network ಗಳು ಭವಿಷ್ಯದ ಸಂಪರ್ಕ ವ್ಯವಸ್ಥೆಗಾಗಿ ಬಹಳ ಉಪಯುಕ್ತವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಜಿಟಲ್ ಪ್ರಗತಿಯಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ITU ಸಭೆಗಳನ್ನು ಆಯೋಜಿಸಲು ಭಾರತ ಬೆಂಬಲ ಕೋರುತ್ತಿದೆ. ಇದೇ ಸಂದರ್ಭದಲ್ಲಿ, ITU ರೇಡಿಯೋ ಕಮ್ಯುನಿಕೇಷನ್ ಬ್ಯೂರೋದ (2027-30) ನಿರ್ದೇಶಕಿ ಹುದ್ದೆಗೆ ಮೊದಲ ಮಹಿಳೆ ಮತ್ತು ಮೊದಲ ಪ್ರಾದೇಶಿಕ ಅಭ್ಯರ್ಥಿಯಾಗಿ ಭಾರತೀಯ ಅಭ್ಯರ್ಥಿ ಎಂ. ರೇವತಿ ಅವರನ್ನು ಕೋರಿದರು.
ಸಂವಹನ ಸಚಿವಾಲಯದ ಪ್ರಕಾರ, ಈ ಸಭೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಎಐಯುಳ್ಳ ಭವಿಷ್ಯದ ದೃಷ್ಟಿಯಲ್ಲಿ ಒಂದು ನಿಗೂಢ ಹೆಜ್ಜೆ ಆಗಿದೆ.