Home India Amritsar Grenade Attack ಪ್ರಮುಖ ಆರೋಪಿ Encounter ​ನಲ್ಲಿ ಸಾವು

Amritsar Grenade Attack ಪ್ರಮುಖ ಆರೋಪಿ Encounter ​ನಲ್ಲಿ ಸಾವು

Amritsar grenade attack


ಅಮೃತಸರದ ದೇವಾಲಯದ ಮೇಲೆ ನಡೆದ ಗ್ರೆನೇಡ್ ದಾಳಿಯ (Amritsar grenade attack) ಪ್ರಮುಖ ಆರೋಪಿ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯರಾತ್ರಿ, ಅಪರಿಚಿತ ದಾಳಿಕೋರನು ಬೈಕ್ ನಲ್ಲಿ ಬಂದು ಕಟ್ಟಡದ ಕೆಳಗೆ ಸ್ಫೋಟಕ ಸಾಧನ ಎಸೆದ ಕಾರಣ ಸ್ಫೋಟ ಸಂಭವಿಸಿತು. ಗೋಡೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ಕಿಟಕಿಗಳ ಗಾಜುಗಳು ಒಡೆದಿದ್ದವು. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ. ಆದರೆ, ಸ್ಫೋಟವು ಸ್ಥಳೀಯ ನಿವಾಸಿಗಳಿಗೆ ಭಯವನ್ನುಂಟುಮಾಡಿತು.

ಸೋಮವಾರ ಬೆಳಗ್ಗೆ, ರಾಜಸಾನ್ಸಿ ಪ್ರದೇಶದಲ್ಲಿ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ಇದರ ಹಿನ್ನೆಲೆ, ಸಿಐಎ ಮತ್ತು ಎಸ್‌ಎಚ್ಒ ಛೆಹರ್ತಾದಿಂದ ವಿಶೇಷ ತಂಡಗಳನ್ನು ನಿಯೋಜಿಸಲಾಯಿತು.

ಪೊಲೀಸರು ಶಂಕಿತರ ಬೈಕನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಗುಂಡು ಹಾರಿಸಿದರು. ಘರ್ಷಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಗುರುಪ್ರೀತ್ ಸಿಂಗ್ ಮತ್ತು ಇನ್ಸ್ಪೆಕ್ಟರ್ ಅಮೋಲಕ್ ಸಿಂಗ್ ಗಾಯಗೊಂಡರು. ಆತ್ಮರಕ್ಷಣೆಯಾಗಿ, ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಗುಂಡು ಹಾರಿಸಿ ಪ್ರಮುಖ ಆರೋಪಿ ಗುರ್ಸಿದಕ್ ಸಿಂಗ್ ಅವರನ್ನು ಗಾಯಗೊಳಿಸಿದರು, ಬಳಿಕ ಅವರು ಸಾವನ್ನಪ್ಪಿದರು. ಇತರ ಆರೋಪಿಗಳು ಸ್ಥಳದಿಂದ ಪರಾರಿಯಾದರು.

ಈ ದಾಳಿಯ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ (ISI) ಪಾತ್ರವಿರಬಹುದು ಎಂಬ ಅನುಮಾನವಿದೆ. ಕಳೆದ ನಾಲ್ಕು ತಿಂಗಳಲ್ಲಿ ಅಮೃತಸರ ಮತ್ತು ಗುರುದಾಸ್ಪುರದಲ್ಲಿ ಹಲವಾರು ಸ್ಫೋಟ ಘಟನೆಗಳು ಸಂಭವಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version