Home Karnataka Bengaluru Urban Covid-19 ನಿರ್ಬಂಧ ಸಡಲಿಕೆ ಬಗ್ಗೆ ತಜ್ಞರ ಸಭೆ ನಂತರ ತೀರ್ಮಾನ

Covid-19 ನಿರ್ಬಂಧ ಸಡಲಿಕೆ ಬಗ್ಗೆ ತಜ್ಞರ ಸಭೆ ನಂತರ ತೀರ್ಮಾನ

Karnataka Chief Minister Basavaraj Bommai Covid-19 Press Meet

Bengaluru (Bangalore) : ರಾಜ್ಯದಲ್ಲಿ Covid-19 ನಿರ್ಬಂಧಗಳ ಸಡಿಲಿಸುವುದರ ಕುರಿತು ಶುಕ್ರವಾರ ತಜ್ಞರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ (Chief Minister of Karnataka) ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, Covid-19 ನಿಂದ ಈ ಬಾರಿ Hospital ದಾಖಲಾತಿ ಪ್ರಮಾಣ ಬಹಳಷ್ಟು ಕಡಿಮೆಯಿದೆ. ಹಾಗಾಗಿ ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಭಾವನೆ ಇದೆ. ತಜ್ಞರು ಇದನ್ನು ಪರಾಮರ್ಶೆ ಮಾಡುತ್ತಿದ್ದು, ಶುಕ್ರವಾರದ ಸಭೆಯಲ್ಲಿ ಇದರ ಕುರಿತು ಸಂಪೂರ್ಣ ಚಿತ್ರಣಸಿಗಲಿದೆ. ಸ್ಪಷ್ಟ ಮಾಹಿತಿ ತಜ್ಞರಿಂದ ದೊರೆತ ನಂತರ ನಿರ್ಬಂಧ ಸಡಿಲಿಕೆಯ ಕುರಿತು ತೀರ್ಮಾನ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕೋವಿಡ್ ಅಲೆಯು ಪೀಕ್ (Covid-19 Third Wave Peak) ತಲುಪಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳೊಂದಿಗೆ ಸಭೆ

ಜಿಲ್ಲಾಧಿಕಾರಿಗಳೊಂದಿಗೆ ನಿನ್ನೆ Covid-19 ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮದ (Vaccination) ಕುರಿತು ವೀಡಿಯೊ ಸಂವಾದ ನಡೆಸಲಾಗಿದ್ದು, Vaccine ನೀಡಿಕೆಯ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ತೀವ್ರ ಗತಿಯಲ್ಲಿ 2 Dose ಹಾಗೂ 15-18 ವರ್ಷದವರಿಗೆ ಲಸಿಕೆ ನೀಡಲು ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ.

94% ಜನ Home Isolation ನಲ್ಲಿರುವುದರಿಂದ ಆರೋಗ್ಯ ಇಲಾಖೆ ಸೋಂಕಿತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟೆಲಿ ಟ್ರಯಾಜಿಂಗ್ (Tele-Triaging) ಹಾಗೂ ಔಷಧ ಕಿಟ್ (Medicine Kits) ಗಳನ್ನು ಎಲ್ಲರಿಗೂ ತಪ್ಪದೆ ವಿತರಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು, Booster Dose ಗಳನ್ನು ತಪ್ಪದೆ ನೀಡಬೇಕು, ಆಸ್ಪತ್ರೆಗಳಲ್ಲಿ OPD (ಹೊರ ರೋಗಿಗಳ ಇಲಾಖೆ) ಬಲಪಡಿಸಲು ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದರು.

ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ

Covid-19 ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ದಾಖಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಯಾವುದೇ ತರಮ್ಯವಿಲ್ಲದೆ ಕೋವಿಡ್ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version