Home Business ನೆಲಮಹಡಿ ಮಳಿಗೆಗಳ ತೆರವಿಗೆ BBMP ಸೂಚನೆ – ವ್ಯಾಪಾರಿಗಳಿಗೆ ಶಾಕ್

ನೆಲಮಹಡಿ ಮಳಿಗೆಗಳ ತೆರವಿಗೆ BBMP ಸೂಚನೆ – ವ್ಯಾಪಾರಿಗಳಿಗೆ ಶಾಕ್

BBMP's instruction to clear ground floor shops

Bengaluru: ಬೆಂಗಳೂರಿನಲ್ಲಿ ವೈಜ್ಞಾನಿಕ ಯೋಜನೆಯಿಲ್ಲದೇ ಮತ್ತು ಅವ್ಯವಸ್ಥಿತವಾಗಿ ಬಹುಮಹಡಿಗಳ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದರಿಂದ ಅಪಾಯಕಾರಿಯಾದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ (BBMP) ಮುಖ್ಯ ಆಯುಕ್ತರು ಒಂದು ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯ ಬಳಿಕ ಅವರು, ನೆಲಮಹಡಿಗಳನ್ನು ಕೇವಲ ಪಾರ್ಕಿಂಗ್ ಗಾಗಿ ಮಾತ್ರ ಬಳಸಬೇಕು ಎಂಬ ನಿಬಂಧನೆ ಜಾರಿಗೊಳಿಸಿದ್ದಾರೆ. ಆದರೆ, ಈಗ ಕೆಲವು ಕಟ್ಟಡಗಳಲ್ಲಿ ವಾಣಿಜ್ಯ ಮಳಿಗೆಗಳಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

ಈ ನಿರ್ಧಾರಕ್ಕೆ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೆಜೆಸ್ಟಿಕ್‌ನ ನ್ಯಾಷನಲ್ ಬಜಾರ್, ಸಿಟಿ ಸೆಂಟರ್ ಸುತ್ತಮುತ್ತ ಹಲವಾರು ವರ್ಷಗಳಿಂದ ಈ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳ ತೆರವಿಗೆ ಬಿಬಿಎಂಪಿ ಮುಂದಾಗಿರುವುದು ವ್ಯಾಪಾರಿಗಳಿಗೆ ಶಾಕ್ ತಂದಿದೆ.

ವ್ಯಾಪಾರಿಗಳು ಕೇಳುತ್ತಿರುವ ಪ್ರಶ್ನೆ ಏನೆಂದರೆ – “ಅದೇ ನಿಯಮವನ್ನು ಹೊಸ ಕಟ್ಟಡಗಳಿಗೆ ಅನ್ವಯಿಸಿ. ನಾವು ಇಷ್ಟು ವರ್ಷಗಳಿಂದ ಈ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಈಗ ನಮಗೆ ಎಲ್ಲಿ ಹೋಗಬೇಕು?”

ಬಿಬಿಎಂಪಿ ಸಾರ್ವಜನಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಎಲ್ಲಾ ವಲಯಗಳಲ್ಲಿ ಈ ನಿಯಮ ಜಾರಿಗೆ ತಯಾರಿ ನಡೆದಿದೆ. ಆದರೆ ವ್ಯಾಪಾರಿಗಳ ಆಕ್ರೋಶವನ್ನು ಬಿಬಿಎಂಪಿ ಹೇಗೆ ಎದುರಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version