
Guntur (Andhra Pradesh): ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ (Andhra Pradesh Chief Minister Y.S. Jagan Mohan Reddy) ಅವರ ರ್ಯಾಲಿಯ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಸೇರಿದಂತೆ ಆರು ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಘಟನೆಯಲ್ಲಿ, ಜಗನ್ ಪ್ರಯಾಣಿಸುತ್ತಿದ್ದ ವಾಹನವೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ತಮ್ಮ ತನಿಖೆಯಲ್ಲಿ ತಿಳಿದುಬಂದಿದೆ. ಮೃತ ವ್ಯಕ್ತಿಯ ಪತ್ನಿ ಚೀಲಿ ಲುರ್ದು ಮೆರಿ ಎಂಬವರು ಪೊಲೀಸ್ ದೂರು ನೀಡಿದ್ದು, ಮೊದಲಿಗೆ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106(1) ಅಡಿಯಲ್ಲಿ ದಾಖಲಿಸಲಾಗಿತ್ತು. ನಂತರ ಇದನ್ನು 105 (ಕೊಲೆಗೆ ಸಮನಾದ ಅಪರಾಧಿಕ ನರಹತ್ಯೆ) ಮತ್ತು 49 (ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯ) ಅಡಿಯಲ್ಲಿ ಮರು ವರ್ಗೀಕರಿಸಲಾಗಿದೆ.
ಜೂನ್ 18ರಂದು ಜಗನ್ ಅವರ ಬೆಂಗಾವಲು ವಾಹನಗಳು ತಡೆಪಲ್ಲಿಯಿಂದ ಸತ್ತೇನಪಲ್ಲಿಗೆ ಹೋಗಲು ಅನುಮತಿ ಪಡೆದಿದ್ದವು. ನಲ್ಲಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಎಟುಕುರು ಬೈಪಾಸ್ ಬಳಿ ಈ ವಾಹನಗಳಲ್ಲಿ ಒಂದು ಅಪಘಾತಕ್ಕೆ ಒಳಗಾಯಿತು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ಮೃತಪಟ್ಟರು.
ಮೃತ ಚೀಲಿ ಸಿಂಗಯ್ಯ ಅವರ ಪತ್ನಿಯ ದೂರುದಾರರಾಗಿ ಪ್ರಕರಣ ದಾಖಲಿಸಲಾಗಿದೆ. ಈಗ ಜಗನ್ ಮೋಹನ್ ರೆಡ್ಡಿ, ಕಾರು ಚಾಲಕ ರಮಣ ರೆಡ್ಡಿ, ಆಪ್ತ ಸಹಾಯಕ ಕೆ. ನಾಗೇಶ್ವರ ರೆಡ್ಡಿ, ಮಾಜಿ ಸಂಸದ ವೈ.ವಿ. ಸುಬ್ಬಾ ರೆಡ್ಡಿ, ಮಾಜಿ ಶಾಸಕ ಪೆರ್ನಿ ನಾನಿ ಮತ್ತು ಮಾಜಿ ಸಚಿವೆ ವಿದಾದಲ ರಜಿನಿ ವಿರುದ್ಧ FIR ದಾಖಲಾಗಿದೆ.