Home India Telangana ಸಚಿವ ಮೇಕಪತಿ ಗೌತಮರೆಡ್ಡಿ ನಿಧನ

ಸಚಿವ ಮೇಕಪತಿ ಗೌತಮರೆಡ್ಡಿ ನಿಧನ

0
Andhra Pradesh IT Minister Mekapati Goutham Reddy Demise

Hyderabad Telangana : ಆಂಧ್ರ ಪ್ರದೇಶ ಸರ್ಕಾರದ ಕೈಗಾರಿಕೆ ಮತ್ತು ಐಟಿ ಸಚಿವ ಮೇಕಪತಿ ಗೌತಮರೆಡ್ಡಿ (50) (Mekapati Goutham Reddy) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ನೆಲ್ಲೂರು ಜಿಲ್ಲೆಯ ಆತ್ಮಾಕೂರು ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿದ್ದ ಗೌತಮ್ ರೆಡ್ಡಿ , ಫೆಬ್ರವರಿ 20ರಂದು Dubai ಯಿಂದ ಹೈದರಾಬಾದ್​ಗೆ ಬಂದಿದ್ದ ಅವರು ಕಳೆದ ವಾರ ದುಬೈ ಎಕ್ಸ್​ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ Andhra Pradesh ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದರು.

ಗೌತಮ್​ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಜೂಬ್ಲಿ ಹಿಲ್ಸ್​ನ ಆಸ್ಪತ್ರೆಗೆ ರವಾನೆ ಮಾಡುತ್ತಿರುವಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ KCR, TDP ಅಧ್ಯಕ್ಷ ನಾರ ಚಂದ್ರಬಾಬು ನಾಯ್ಡು, ಜೆನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ತಮ್ಮ ಸಂತಾಪ ಸೂಚಿಸಿದ್ದಾರೆ.

ಮೃತರಿಗೆ ಗೌರವ ಸೂಚಿಸಲು ಪವನ್ ಕಲ್ಯಾಣ್ ನಟಿಸಿರುವ ಭೀಮ್ಲಾ ನಾಯಕ್ (Bheemla Nayak) Pre Release Event ಅನ್ನು ಮುಂದೂಡಲಾಗಿದೆ ಎಂದು ಸಿತಾರಾ ಎಂಟರ್ಟೈನ್ಮೆಂಟ್ಸ್ ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಮುಖಾಂತರ ತಿಳಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version