back to top
21.1 C
Bengaluru
Monday, October 27, 2025
HomeKarnatakaBengaluru Urbanಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ – DCM DK Shivakumar ಭರವಸೆ

ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ – DCM DK Shivakumar ಭರವಸೆ

- Advertisement -
- Advertisement -

Bengaluru, Karnataka, India : ರಾಜ್ಯದ ಹೆಗ್ಗುರುತುಗಳಾದ Cubbon Park ಮತ್ತು Lalbagh ಅಭಿವೃದ್ಧಿಗೆ ಸರ್ಕಾರದಿಂದ ಹೊಸ ಉಸಿರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಭಾನುವಾರ ನಡೆದ “ಬೆಂಗಳೂರು ನಡಿಗೆ” ಕಾರ್ಯಕ್ರಮದ ವೇಳೆ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ ₹5 ಕೋಟಿ ಅನುದಾನ ನೀಡಲಾಗುವುದಾಗಿ ಘೋಷಿಸಿದರು.

ಕಬ್ಬನ್ ಪಾರ್ಕ್‌ನಲ್ಲಿ ನಾಗರಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ನಾಗರಿಕರು ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕಾಗಿ ಮನವಿ ಮಾಡಿದ್ದಾರೆ. ಅವರ ವಿನಂತಿಯಂತೆ ಉಳಿದ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತದೆ. ಸರ್ಕಾರ ಈ ಪಾರ್ಕ್‌ನಲ್ಲಿ ಯಾವುದೇ ಹೊಸ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡುವುದಿಲ್ಲ. ಕಬ್ಬನ್ ಪಾರ್ಕ್‌ನ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಕಬ್ಬನ್ ಪಾರ್ಕ್ – ಕೇವಲ ಉದ್ಯಾನವಲ್ಲ, ಬೆಂಗಳೂರಿನ ಇತಿಹಾಸ

ಡಿ.ಕೆ. ಶಿವಕುಮಾರ್ ಅವರು ತಮ್ಮ ನೆನಪಿನ ಹಾದಿಯಲ್ಲೂ ಕಬ್ಬನ್ ಪಾರ್ಕ್‌ನ ಪಾತ್ರವನ್ನು ಸ್ಮರಿಸಿದರು:
“ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆ. ಮದುವೆಯಾದ ನಂತರ ನನ್ನ ಹೆಂಡತಿಯನ್ನು ಕರೆದುಕೊಂಡು ಬಂದ ಮೊದಲ ಸ್ಥಳವೂ ಇದೇ ಕಬ್ಬನ್ ಪಾರ್ಕ್,” ಎಂದು ಅವರು ನಗೆಚಿಮ್ಮಿದರು.

“ಈ ಪಾರ್ಕ್‌ನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಸಹ ಆಲೋಚನೆ ಮಾಡಲಾಗುತ್ತದೆ,” ಎಂದರು.

ನಗರದಾದ್ಯಂತ ಹೊಸ ‘ಟ್ರೀ ಪಾರ್ಕ್’ಗಳ ಯೋಜನೆ

ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿ, ನಗರದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಮಾದರಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ‘ಟ್ರೀ ಪಾರ್ಕ್’ಗಳ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
“ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ನಗರದಲ್ಲಿ ಹಸಿರು ವಲಯ ಉಳಿಯುತ್ತದೆ,” ಎಂದು ಅವರು ಹೇಳಿದರು.
ಇದಲ್ಲದೆ, ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೇ ₹10 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಅವರು ನೆನಪಿಸಿದರು.

ಹೈಕೋರ್ಟ್ ಸ್ಥಳಾಂತರ ಮತ್ತು ನವೀಕರಣದ ವಿಚಾರದಲ್ಲೂ ಸ್ಪಷ್ಟನೆ

ನ್ಯಾಯಮಿತ್ರ ಸಹಕಾರಿ ಬ್ಯಾಂಕ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ವಕೀಲರು ಹಾಗೂ ನ್ಯಾಯಮೂರ್ತಿಗಳು ಹೈಕೋರ್ಟ್ ಸ್ಥಳ ವಿಸ್ತರಣೆಗಾಗಿ 15–20 ಎಕರೆ ಭೂಮಿ ನೀಡುವಂತೆ ಮನವಿ ಮಾಡಿದ್ದನ್ನು ಉಲ್ಲೇಖಿಸಿ,
“ಈ ವಿಷಯವನ್ನು ಸರ್ಕಾರದ ಮುಂದಿಟ್ಟುಕೊಳ್ಳುತ್ತೇನೆ. ಹೈಕೋರ್ಟ್ ಅನ್ನು ನಗರದಿಂದ ಹೊರಗೆ ಸ್ಥಳಾಂತರಿಸುವ ಯೋಚನೆ ಇಲ್ಲ, ಆದರೆ ಹತ್ತಿರದಲ್ಲೇ ಸೂಕ್ತ ಸ್ಥಳ ಹುಡುಕುವ ಕೆಲಸ ನಡೆಯುತ್ತಿದೆ,” ಎಂದು ಹೇಳಿದರು.

ಸುರಕ್ಷತೆಗಾಗಿ ಹೈಟೆಕ್ ಕ್ಯಾಮೆರಾಗಳ ಅಳವಡಿಕೆ

“ಕಬ್ಬನ್ ಪಾರ್ಕ್‌ನಲ್ಲಿ ಯಾರು ಯಾವ ಸಮಯಕ್ಕೆ ಒಳಬಂದರು, ಹೊರಹೋದರು ಎಂಬುದನ್ನು ದಾಖಲಿಸಲು ಹೈಟೆಕ್ ಕ್ಯಾಮೆರಾಗಳ ಅಳವಡಿಕೆ ನಡೆಯಲಿದೆ. ಆಯುಕ್ತರ ಕಚೇರಿಯಿಂದ ನೇರವಾಗಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ,” ಎಂದು ಡಿಸಿಎಂ ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page