back to top
26.6 C
Bengaluru
Tuesday, September 16, 2025
HomeIndiaಎಂಜಿನಿಯರ್‌ಗಳ ದಿನ: Sir M. Visvesvaraya ಸ್ಮರಣೆ

ಎಂಜಿನಿಯರ್‌ಗಳ ದಿನ: Sir M. Visvesvaraya ಸ್ಮರಣೆ

- Advertisement -
- Advertisement -

ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ರಾಷ್ಟ್ರೀಯ ಎಂಜಿನಿಯರ್‌ಗಳ ದಿನವಾಗಿ ಆಚರಿಸಲಾಗುತ್ತದೆ. ಈ ಆಚರಣೆ 1968ರಲ್ಲಿ ಆರಂಭವಾಯಿತು. ಕೇವಲ ಭಾರತದಲ್ಲೇ ಅಲ್ಲ, ಶ್ರೀಲಂಕಾ ಮತ್ತು ತಾಂಜಾನಿಯಾಗಳಲ್ಲಿಯೂ ಈ ದಿನವನ್ನು ಎಂಜಿನಿಯರ್‌ಗಳ ದಿನವಾಗಿ ಆಚರಿಸುತ್ತಾರೆ.

1908ರಲ್ಲಿ ಹೈದರಾಬಾದ್‌ನಲ್ಲಿ ಭಾರೀ ಪ್ರವಾಹ ಸಂಭವಿಸಿತು. ಮೂಸಿ ನದಿ ಉಕ್ಕಿ ಹರಿದು ಸಾವಿರಾರು ಜನರು ಸಾವನ್ನಪ್ಪಿದರು. ನಂತರ ವಿಶ್ವೇಶ್ವರಯ್ಯ ಅವರು ಉಸ್ಮಾನ್ ಸಾಗರ್ (1920) ಮತ್ತು ಹಿಮಾಯತ್ ಸಾಗರ್ (1927) ಜಲಾಶಯಗಳನ್ನು ನಿರ್ಮಿಸಿದರು. ಇವುಗಳಿಂದ ಹೈದರಾಬಾದ್‌ನಲ್ಲಿ ಮತ್ತೆ ದೊಡ್ಡ ಪ್ರವಾಹ ಸಂಭವಿಸಲಿಲ್ಲ.

ಮೈಸೂರಿನ ದಿವಾನರಾಗಿದ್ದಾಗ, ವಿಶ್ವೇಶ್ವರಯ್ಯ ಅವರು ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಆ ಸಮಯದಲ್ಲಿ ಇದು ಏಷ್ಯಾದ ಅತಿದೊಡ್ಡ ಯೋಜನೆ ಎಂದು ಗುರುತಿಸಲ್ಪಟ್ಟಿತು.

ಬಾಲ್ಯ ಮತ್ತು ವಿದ್ಯಾಭ್ಯಾಸ: ವಿಶ್ವೇಶ್ವರಯ್ಯ 1861ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರದ ಮದ್ದೇನಹಳ್ಳಿಯಲ್ಲಿ ಜನಿಸಿದರು. ಬಾಲ್ಯದಲ್ಲಿ ತಂದೆ ಕಳೆದುಕೊಂಡ ಅವರು, ಟ್ಯೂಷನ್ ಮಾಡಿ ಓದಿದ್ದರು. ನಂತರ ಮದ್ರಾಸ್‌ನಲ್ಲಿ ಪದವಿ ಪಡೆದು, ಪುಣೆಯಲ್ಲಿ ಎಂಜಿನಿಯರಿಂಗ್ ಓದಿದರು.

ಪ್ರಮುಖ ಆವಿಷ್ಕಾರ: ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಸ್ವಯಂ ತೆರೆಯುವ ಪ್ರವಾಹದ್ವಾರಗಳನ್ನು ಆವಿಷ್ಕರಿಸಿದರು. ಈ ತಂತ್ರಜ್ಞಾನ ಇಂದಿಗೂ ಬಳಸಲಾಗುತ್ತಿದೆ.

ಇತರ ಸಾಧನೆಗಳು

  • ಹೈದರಾಬಾದ್‌ನಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸಿದರು.
  • ವಿಶಾಖಪಟ್ಟಣ ಬಂದರಿನ ಕರಾವಳಿಯನ್ನು ರಕ್ಷಿಸುವ ಕೆಲಸ ಮಾಡಿದರು.
  • ತಿರುಪತಿ ಘಾಟ್ ರಸ್ತೆಯ ವಿನ್ಯಾಸದಲ್ಲಿ ಸಹ ಪಾಲ್ಗೊಂಡರು.

ಪ್ರಶಸ್ತಿ ಮತ್ತು ಗೌರವಗಳು

  • 1955ರಲ್ಲಿ ಭಾರತ ರತ್ನ ಪ್ರಶಸ್ತಿ.
  • ಬ್ರಿಟಿಷ್ ಸರ್ಕಾರದಿಂದ ನೈಟ್ ಹುಡ್ (Sir) ಬಿರುದು.
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೂ ಸೇವೆ.

ಅಪಾರ ಕೊಡುಗೆ ನೀಡಿದ ಸರ್ ಎಂ. ವಿಶ್ವೇಶ್ವರಯ್ಯ ಅವರು 1962ರ ಏಪ್ರಿಲ್ 12ರಂದು ನಿಧನರಾದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page