Tuesday, April 16, 2024
HomeKarnatakaBengaluru Urbanಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

Bengaluru : ಶುಕ್ರವಾರ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ವೇಳೆ ಸೂರ್ಯ ರಶ್ಮಿಯು ಗವಿಪುರದಲ್ಲಿರುವ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದ (Gavipura Gavi Gangadhareshwara Temple) ಶಿವಲಿಂಗವನ್ನು ಸ್ಪರ್ಶಿಸಿದೆ. ದೇಗುಲದ ಬಲಭಾಗದಲ್ಲಿರುವ ಕಿಟಕಿಯ ಸರಳುಗಳ ಮಧ್ಯದಿಂದ ಸಂಜೆ 5.17ರ ಸುಮಾರಿಗೆ ಗರ್ಭಗುಡಿ ಪ್ರವೇಶಿಸಿದ ಸೂರ್ಯ ಕಿರಣ , ನಂದಿ ವಿಗ್ರಹದ ಎಡಗಾಲನ್ನು ಸ್ಪರ್ಶಿಸಿ ಬಳಿಕ ಅದರ ಎರಡು ಶೃಂಗಗಳ ಮಧ್ಯಭಾಗದಿಂದ ಹಾದು ಗವಿ ಗಂಗಾಧರೇಶ್ವರನ ಪಾದ ಸ್ಪರ್ಶಿಸಿತು. ನಂತರ ನೋಡು ನೋಡುತ್ತಲೇ ಕಿರಣಗಳು ‌ಲಿಂಗವನ್ನು ಪೂರ್ಣವಾಗಿ ಆವರಿಸಿದವು.

ಗಂಟೆ, ಜಾಗಟೆ ಹಾಗೂ ನಗಾರಿಯ ಸದ್ದುಗಳೊಂದಿಗೆ ಶಿವಲಿಂಗಕ್ಕೆ ನಿರಂತರವಾಗಿ ಕ್ಷೀರ ಹಾಗೂ ಎಳನೀರಿನ ಅಭಿಷೇಕ ಮಾಡಲಾಯಿತು. ಹರನ ಸ್ತೋತ್ರಗಳನ್ನು ಅಲ್ಲಿ ನೆರದಿದ್ದ ಅರ್ಚಕರು ಸ್ಮರಿಸುತ್ತಾ ಭಾವ ಪರವಶರಾದರು. Covid-19 ನಿಂದಾಗಿ ಈ ಬಾರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರಾಕರಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page