Monday, May 13, 2024
HomeKarnatakaDavanagereರೈತರಿಗೆ ತುಂತುರು ನೀರಾವರಿ ಘಟಕದ ಪರಿಕರಗಳ ವಿತರಣೆ

ರೈತರಿಗೆ ತುಂತುರು ನೀರಾವರಿ ಘಟಕದ ಪರಿಕರಗಳ ವಿತರಣೆ

Honnali, Davanagere : ಹೊನ್ನಾಳಿ ನಗರದ ತುಮ್ಕೋಸ್ ಆವರಣದಲ್ಲಿ 30 ರೈತ ಫಲಾನುಭವಿಗಳಿಗೆ ತುಂತುರು ನೀರಾವರಿ (Sprinkler System) ಘಟಕದ ಪರಿಕರಗಳನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ (M.P. Renukacharya) ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಘಟಕಕ್ಕೆ ಸರ್ಕಾರವು 90% ರಷ್ಟು ರಿಯಾಯಿತಿ ದರದಲ್ಲಿ ಅನುದಾನ ಲಭ್ಯವಿದ್ದು, ರೈತರು ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆದುಕೊಳ್ಳಬಹುದು” ಎಂದು ಹೇಳಿದರು.

“75 mm ಘಟಕದ ಒಟ್ಟು ವೆಚ್ಚ ₹ 20,702 ಇದ್ದು, ಸರ್ಕಾರದ ಸಹಾಯಧನ ₹ 18,632 ಇರುತ್ತದೆ. ಅದಕ್ಕೆ ರೈತರ ವಂತಿಕೆ ₹ 2,070 ಪಾವತಿಸಬೇಕು. ಅದೇ ರೀತಿ 63 mm ಘಟಕದ ಒಟ್ಟು ವೆಚ್ಚ ₹ 19,324 ಇದ್ದು, ಸರ್ಕಾರದ ಸಹಾಯಧನ ₹ 17,392 ಇರುತ್ತದೆ. ಅದಕ್ಕೆ ರೈತರ ವಂತಿಕೆ ₹ 1,932 ಆಗಿರುತ್ತದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಹೇಳಿದರು.

ತಾಲ್ಲೂಕು BJP ಮುಖಂಡರಾದ ಅರಕೆರೆ ನಾಗರಾಜ್, ಶಿವು ಹುಡೇದ್, ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹಾಗೂ ರೈತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page