
Kashmir: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತೀಯ ಸೇನೆ (Indian Army) ಭಾರಿ ಮಟ್ಟದ ಪ್ರತಿಕ್ರಿಯಾತ್ಮಕ ಕಾರ್ಯಾಚರಣೆಗೆ ಮುಂದಾಗಿದೆ. ಮೋದಿ ಸರ್ಕಾರದಿಂದ ಮುಕ್ತವಾಗಿ ಕಾರ್ಯಾಚರಣೆ ನಡೆಸಲು ಅನುಮತಿ ಸಿಕ್ಕ ಬೆನ್ನಲ್ಲೇ, ಸೇನೆ ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಗುರಿಯಾಗಿಸಿ ತೀವ್ರ ದಾಳಿ ನಡೆಸುತ್ತಿದೆ.
ಇತ್ತೀಚೆಗೆ, ಶಂಕಿತ ಉಗ್ರ ಆಸಿಫ್ ಶೇಖ್ನ ಪಹಲ್ಗಾಮ್ನಲ್ಲಿರುವ ಮನೆ ಧ್ವಂಸಗೊಂಡಿದೆ. ಇದೀಗ ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಐದು ಭಯೋತ್ಪಾದಕರ ಮನೆಗಳನ್ನು ಸೇನೆ ಧ್ವಂಸಗೊಳಿಸಿದೆ. ಶೋಪಿಯಾನ್ನ ಚೋಟಿಪೋರಾ ಗ್ರಾಮದಲ್ಲಿ ಲಷ್ಕರ್ ಎ ತೈಬಾ (ಎಲ್ಇಟಿ) ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಮನೆ ನಾಶವಾಗಿದ್ದು, ಈತನನ್ನು ಕಳೆದ ನಾಲ್ಕು ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್ನ ಮಾತಲಂ ಪ್ರದೇಶದಲ್ಲಿ ಜಾಹಿದ್ ಅಹ್ಮದ್, ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ ಅಹ್ಸಾನ್ ಉಲ್ ಹಕ್ ಮತ್ತು ಎಹ್ಸಾನ್ ಅಹ್ಮದ್ ಶೇಖ್, ಕಚಿಪೋರಾ ಪ್ರದೇಶದಲ್ಲಿ ಹರಿಸ್ ಅಹ್ಮದ್ ಮನೆಗಳನ್ನು ಕೂಡ ಸೇನೆ ನೆಲಸಮಗೊಳಿಸಿದೆ. ಈ ಎಲ್ಲಾ ಉಗ್ರರನ್ನು ವಾಂಟೆಡ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಪಹಲ್ಗಾಮ್ ದಾಳಿಯ ಶಂಕಿತ ಥೋಕರ್ ಮತ್ತು ಇತರ ಇಬ್ಬರ ರೇಖಾಚಿತ್ರಗಳನ್ನು ಅನಂತ್ನಾಗ್ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತರ ಪೈಕಿ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಪಾಕಿಸ್ತಾನ ಪ್ರಜೆಗಳು. ಇವರ ಬಗ್ಗೆ ಮಾಹಿತಿ ನೀಡುವವರಿಗೆ ₹20 ಲಕ್ಷ ಬಹುಮಾನ ಘೋಷಿಸಲಾಗಿದೆ.
ಸೇನೆ, ಸಿಆರ್ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಈ ಶಂಕಿತರಿಗಾಗಿ ಹಮೀದಾಗಿ ಹುಡುಕಾಟ ನಡೆಸುತ್ತಿದ್ದಾರೆ.