Home Business ಭಾರತದ ಪ್ರಹಾರ: IMF ಸಭೆಯಲ್ಲಿ Pakistan ಕ್ಕೆ ಸಾಲ ನೀಡುವುದರ ಬಗ್ಗೆ ಚರ್ಚೆ

ಭಾರತದ ಪ್ರಹಾರ: IMF ಸಭೆಯಲ್ಲಿ Pakistan ಕ್ಕೆ ಸಾಲ ನೀಡುವುದರ ಬಗ್ಗೆ ಚರ್ಚೆ

IMF

New Delhi: ಪಾಕಿಸ್ತಾನವು ಉಗ್ರಗಾಮಿಗಳನ್ನು ಅಮಾನುಷ ಕೃತ್ಯಗಳಿಗೆ ಬಳಸಿಕೊಂಡು ಭಯೋತ್ಪಾದನೆಗೆ ಸಹಾಯ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ, ಭಾರತವು ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವ ಮೂಲಕ, ಪಾಕಿಸ್ತಾನವನ್ನು (Pakistan) ದಾಹಕ್ಕೆ ತಲುಪಿಸುವ ಹಾಗೆ ಹಲವಾರು ಕಟು ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ರೀತಿ, ಪಾಕಿಸ್ತಾನದ ಡಿಫೆನ್ಸ್ ಸಿಸ್ಟಂನೊಂದಿಗೆ ಆಯುದ್ಧಗಳನ್ನು ಹಾಳುಮಾಡಿ, ಪಾಕಿಸ್ತಾನದೊಂದಿಗೆ ಹಣದ ಹರಿವನ್ನು ನಿಲ್ಲಿಸಲು ಮುಂದಾಗಿದೆ.

ಮೇ 9ರಂದು ಪಾಕಿಸ್ತಾನಕ್ಕೆ ಸಾಲ ನೀಡುವ ಬಗ್ಗೆ IMF ಎಕ್ಸಿಕ್ಯೂಟಿವ್ ಬೋರ್ಡ್ ಸಭೆ ನಡೆಯಲಿದೆ. ಪಾಕಿಸ್ತಾನವು ಈಗಾಗಲೇ 7 ಬಿಲಿಯನ್ ಡಾಲರ್ ಸಾಲವನ್ನು ಐಎಂಎಫ್‌ನಿಂದ ಪಡೆದಿದೆ. ಈ ಸಾಲದ ಪರಾಮರ್ಶೆಯು ಸಭೆಯಲ್ಲಿ ನಡೆಯಲಿದೆ. ಪಾಕಿಸ್ತಾನವು ಹೆಚ್ಚುವರಿ 1.3 ಬಿಲಿಯನ್ ಡಾಲರ್ ಸಾಲವನ್ನು ಯಾಚಿಸಿರುವುದನ್ನು ಐಎಂಎಫ್ ಈ ಸಭೆಯಲ್ಲಿ ಚರ್ಚಿಸಲಿದೆ.

ಭಾರತದ ಮನವಿ: ಪಾಕಿಸ್ತಾನಕ್ಕೆ ಸಾಲ ನೀಡಿದರೆ ಅದು ಭಯೋತ್ಪಾದನೆಗೆ ಬಳಕೆಯಾಗಬಹುದು ಎಂದು ಭಾರತ ಐಎಂಎಫ್ ಹಾಗೂ ವಿಶ್ವಬ್ಯಾಂಕುಗಳಿಗೆ ಮನವಿ ಮಾಡಿದೆ. ನಾಳೆ ನಡೆಯುವ ಸಭೆಯಲ್ಲಿ ಭಾರತವು ಈ ವಿಚಾರವನ್ನು ಹೊಂದಿದ ಅಭಿಪ್ರಾಯವನ್ನು ವ್ಯಕ್ತಪಡಿಸಲಿದೆ.

ಭಾರತವು ಇತ್ತೀಚೆಗೆ ಐಎಂಎಫ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಕೆ.ವಿ. ಸುಬ್ರಮಣಿಯನ್ ಅವರನ್ನು ಹಿಂಪಡೆದಿದ್ದು, ಅವರ ಸ್ಥಾನಕ್ಕೆ ಪರಮೇಶ್ವರನ್ ಅಯ್ಯರ್ ಅವರನ್ನು ಆಯ್ಕೆ ಮಾಡಿದೆ. ಇವರು ಭಾರತೀಯ ಪ್ರತಿನಿಧಿಯಾಗಿದ್ದು, ನಾಳೆಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

IMF ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ಮತದಾನ ಮೂಲಕ ನಿರ್ಧರಿಸಲಾಗಬಹುದು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version