HomeKarnatakaHousing Schemeಯಲ್ಲಿ ಅನ್ಯಾಯ: ಬಡವರಿಗೆ ಇಲ್ಲ, ಹಣಇದ್ದವರಿಗೇ ಮನೆ!

Housing Schemeಯಲ್ಲಿ ಅನ್ಯಾಯ: ಬಡವರಿಗೆ ಇಲ್ಲ, ಹಣಇದ್ದವರಿಗೇ ಮನೆ!

- Advertisement -
- Advertisement -

Kalaburagi: ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದಲ್ಲಿ ಮನೆ ಇಲ್ಲದೆ ಹೋರಾಡುತ್ತಿರುವ ಬಡವರಿಗೆ ಸ್ಲಂ ಬೋರ್ಡ್‌ ಮೂಲಕ 52 ಮನೆಗಳನ್ನು ನೀಡಲು ಯೋಜನೆ (housing scheme) ರೂಪಿಸಲಾಗಿತ್ತು. ಆದರೆ ಈ ಮನೆಗಳನ್ನು ನೈಜ ಫಲಾನುಭವಿಗಳಿಗೆ ನೀಡದೇ, ಅಧಿಕಾರಿಗಳು ಹಣ ಪಡೆದು ಈಗಾಗಲೇ ಮನೆ ಹೊಂದಿರುವವರಿಗೆ ಹಂಚಿಕೆ ಮಾಡಿದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬಗ್ಗೆ ಬಡ ಫಲಾನುಭವಿಗಳು ಕೋಪಗೊಂಡು ಬುಧವಾರ ಕಲಬುರಗಿ ಸ್ಲಂ ಬೋರ್ಡ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮನೆಯ ಹಕ್ಕು ಪತ್ರಗಳು ಇಲ್ಲದ ಕಾರಣದಿಂದಾಗಿ ಹಲವರು ಈಗಾಗಲೇ 15 ವರ್ಷಗಳಿಂದ ಕೆಸರಟಗಿಯ ಸ್ಲಂ ಬೋರ್ಡ್ ಮನೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಅಧಿಕಾರಿಗಳು ಮನೆ ಹಕ್ಕುಪತ್ರ ನೀಡದೆ ದುಡ್ಡು ತಂದುಕೊಳ್ಳುತ್ತಿದ್ದಾರೆಂದು ಕೂಡಾ ಆಕ್ಷೇಪ ವ್ಯಕ್ತವಾಗಿದೆ.

ಈ 52 ಮನೆಗಳು 15-20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಇತ್ತೀಚಿಗೆ ಸಂಪೂರ್ಣ ಶಿಥಿಲ ಸ್ಥಿತಿಗೆ ತಲುಪಿವೆ. ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಹಕ್ಕು ಪತ್ರಕ್ಕಾಗಿ ಹಲವಾರು ವರ್ಷಗಳಿಂದ ಸ್ಲಂ ಬೋರ್ಡ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮತ್ತು ಶಾಸಕರ ಕಚೇರಿಗಳಿಗೆ ಹೋದರೂ ಫಲ ಬರಲಿಲ್ಲ.

ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು “ವಸತಿ ಇಲಾಖೆ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ನೀಡುತ್ತಿದೆ” ಎಂಬ ಆರೋಪ ಮಾಡಿದ್ದಾರೆ. ಇದರಿಂದ ವಸತಿ ಇಲಾಖೆಯೊಳಗಿನ ಭಾರೀ ಮಟ್ಟದ ಭ್ರಷ್ಟಾಚಾರ ಬಹಿರಂಗವಾಗಿದೆ.

ಇದೀಗ ಜನರು ಸರ್ಕಾರದ ಪ್ರತಿಕ್ರಿಯೆಯೆನು ಎಂಬುದನ್ನು ಕುತೂಹಲದಿಂದ ಕಾದು ನೋಡುತ್ತಿದ್ದಾರೆ — ನೈಜ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ನೀಡಲಾಗುತ್ತದೆಯಾ? ಶಿಥಿಲಗೊಂಡ ಮನೆಗಳಿಗೆ ದುರಸ್ತಿ ಮಾಡಲಾಗುತ್ತದೆಯಾ?

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!