ಬಾಲಿವುಡ್ ಗಾಯಕ ಸೋನು ನಿಗಮ್ (Sonu Nigam) ನೀಡಿದ ವಿವಾದಾತ್ಮಕ ಹೇಳಿಕೆಗೆ ಕನ್ನಡ ಚಿತ್ರರಂಗದ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಣವೇನಂದ್ರೆ, ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದಿದ್ದಕ್ಕೆ “ಕನ್ನಡ ಹಾಡು ಕೇಳಿದ ಕಾರಣ” ಎಂದು ಸೋನು ನಿಗಮ್ ಹೇಳಿರುವುದು ಅವರಿಗೆ ಅಸಹ್ಯವಾಗಿದೆ.
“ಸೋನು ನಿಗಮ್ ಹೇಳಿರುವುದು ತಪ್ಪು. ಕನ್ನಡ ಹಾಡು ಕೇಳಿದುದನ್ನ ಉಗ್ರರ ದಾಳಿಗೆ ಹೋಲಿಸುವುದು ಸರಿಯಲ್ಲ. ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸೋನು ನಿಗಮ್ ಈಗಾಗಲೇ ಹಲವು ಕನ್ನಡ ಹಾಡುಗಳನ್ನು ಹಾಡಿದ್ದು, ಕನ್ನಡಿಗರು ಅವರನ್ನು ಎಲ್ಲಿಂದಲೂ ಪ್ರೀತಿಸಿದ್ದಾರೆ. ಆದರೆ ಈ ರೀತಿಯ ಹೇಳಿಕೆಯಿಂದ ಅವರ ಮೇಲಿನ ಗೌರವಕ್ಕೆ ಧಕ್ಕೆಯಾಗುತ್ತದೆ.
ಕಾರ್ತಿಕ್ ಗೌಡ ಅವರು “Che_Krishna” ಎಂಬ ಖಾತೆಯಿಂದ ಬಂದ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.