ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ಗಳ ಸರಣಿ ಆರಂಭವಾಗುತ್ತಿದೆ. ಈ ನಡುವೆಯೇ ಕನ್ನಡಿಗರು ಖುಷಿಯಾಗುವ ಸುದ್ದಿಯೊಂದು ಬಂದಿದೆ. ಸ್ಟಾರ್ ಬ್ಯಾಟ್ಸ್ಮನ್ ಕರುಣ್ ನಾಯರ್ (Karun Nair) ಅವರು ವಿದರ್ಭವನ್ನು ತೊರೆದು ತನ್ನ ತವರು ರಾಜ್ಯವಾದ ಕರ್ನಾಟಕಕ್ಕೆ (Karnataka) ಮರಳಲು ಸಿದ್ಧರಾಗಿದ್ದಾರೆ.
2024-25 ರ ರಣಜಿ ಟ್ರೋಫಿಯಲ್ಲಿ ನಾಯರ್ ವಿದರ್ಭ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಒಟ್ಟು 9 ಪಂದ್ಯಗಳ 16 ಇನ್ನಿಂಗ್ಸ್ಗಳಲ್ಲಿ ಅವರು 49.60 ಸರಾಸರಿಯಲ್ಲಿ 863 ರನ್ ಗಳಿಸಿದ್ದರು. ಈ ಮೂಲಕ ಅವರು ತಂಡದ ಯಶಸ್ಸಿಗೆ ಬಹುಮಟ್ಟಿಗೆ ಕಾರಣರಾಗಿದ್ದರು.
ಕ್ರಿಕ್ಬಜ್ ವರದಿಯ ಪ್ರಕಾರ, ಕರುಣ್ ನಾಯರ್ ಜೊತೆಗೆ ಜಿತೇಶ್ ಶರ್ಮಾ ಕೂಡ ವಿದರ್ಭವನ್ನು ತೊರೆದು ತಾವು ಬೆಳೆಯದ ರಾಜ್ಯಗಳಿಗೆ ಮರಳಲಿದ್ದಾರೆ. ನಾಯರ್ ಕರ್ನಾಟಕ ಸೇರಲಿದ್ದರೆ, ಜಿತೇಶ್ ಬರೋಡಾ ತಂಡ ಸೇರಲಿದ್ದಾರೆ ಎಂದು BCA ಮೂಲಗಳು ತಿಳಿಸಿವೆ.
ಕಳೆದ ಅವಧಿಯಲ್ಲಿ ಈ ಇಬ್ಬರೂ ಆಟಗಾರರು ವಿದರ್ಭ ತಂಡದ ಟ್ರೋಫಿ ಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಣಜಿ ಟ್ರೋಫಿ ಗೆಲುವು, ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ನರ್-ಅಪ್ ಸ್ಥಾನ ಮತ್ತು ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ಫೈನಲ್ ತಲುಪಿದ ಯಶಸ್ಸಿನಲ್ಲಿ ಇವರ ಪಾಲು ದೊಡ್ಡದು.
ನಾಯರ್ ಅವರು ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ನಾಲ್ಕನೇ ಬ್ಯಾಟ್ಸ್ಮನ್ರಾಗಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ 779 ರನ್ ಗಳಿಸಿ ಟಾಪ್ ಸ್ಕೋರ್ ಗಳಿಸುವಲ್ಲಿ ಮುಂಚೂಣಿಗಿದ್ದರು. ಈಗ ಅವರು ಕರ್ನಾಟಕಕ್ಕೆ ವಾಪಸ್ ಆಗುತ್ತಿರುವುದರಿಂದ, ರಾಜ್ಯ ತಂಡಕ್ಕೆ ನಿಜವಾದ ಬಲ ಸಿಕ್ಕಂತಾಗಿದೆ.