Bengaluru: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ನಾಳೆ ಕಲ್ಯಾಣ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಈ ಕುರಿತು ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಭೇಟಿಯಲ್ಲಿ ಅವರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರಗಳು ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಕೆಲವು ಘಟಕಗಳ ಉದ್ಘಾಟನೆ ಮಾಡಲಿದ್ದಾರೆ.
ನಿರ್ಮಲಾ ಸೀತಾರಾಮನ್ ಟ್ವೀಟ್ ನಲ್ಲಿ,
ನಾನು ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ.
ಅಲ್ಲಿ ಸ್ಥಾಪಿಸಲಾಗಿರುವ ಕೃಷಿ ಉತ್ಪನ್ನ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರಗಳು, ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳನ್ನು ಭೇಟಿಯಾಗಿ ಅವರ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ.
MPLADS (ಸಂಸದೀಯ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ) ಬಳಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ.
ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉದ್ಘಾಟನೆ ಮಾಡಲಾಗುವುದು.
ರೈತರು, ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಲು ಉತ್ಸುಕರಾಗಿದ್ದೇನೆ.
ಘಟಕಗಳ ವಿವರಗಳು
ಜಿಲ್ಲೆ | ಉತ್ಪನ್ನಗಳು | ಸಾಮರ್ಥ್ಯ (ಕೆ.ಜಿ/ಗಂ.) |
ವಿಜಯನಗರ | ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಹುಣಸೆ ಬ್ಲಾಕ್ & ಪಲ್ಪ್ | ಕಡಲೆ – 200, ಹುಣಸೆ – 100 |
ಬಳ್ಳಾರಿ | ಮೆಣಸಿನ ಪುಡಿ, ಮೆಣಸಿನ ಫ್ಲೇಕ್ಸ್ | 250 |
ಕೊಪ್ಪಳ | ಹಣ್ಣಿನ ಪಲ್ಪ್, ಹಣ್ಣಿನ ಜ್ಯೂಸ್, ಅಮಚೂರ್ ಪುಡಿ | 500 |
ರಾಯಚೂರು | ಚಿಲಾ ಪ್ರೀಮಿಕ್ಸ್, ಕಡಲೆ ಬೇಳೆ, ತೊಗರಿ ದಾಲ್ ಮಿಲ್ | 350 |
ಯಾದಗಿರಿ | ಕಡಲೆ ಬೆಣ್ಣೆ, ಹುರಿದ ಕಡಲೆ, ಕಡಲೆ ಎಣ್ಣೆ | 300 |
ಕಲಬುರಗಿ | ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು, ಸಂಪೂರ್ಣ ಸಿರಿಧಾನ್ಯ | 500 |
ಬೀದರ್ | ಸೋಯಾಬೀನ್ ಟೋಫು, ಸೋಯಾ ಹಾಲು | 300 |
ಕೇಂದ್ರ ಸಚಿವೆ ನಿರ್ಮಲಾ ಕರ್ನಾಟಕಕ್ಕೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬೆಂಗಳೂರಿನ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ,
- “ನಿರ್ಮಲಾ ಬರ್ತಿದ್ದಾರೋದು ಸಂತೋಷದ ವಿಚಾರ.
- ಮಾಧ್ಯಮದ ಮೂಲಕ ಮನವಿ: ಕಲ್ಯಾಣ ಕರ್ನಾಟಕ ಮಂಡಳಿಯಿಂದ 5 ಸಾವಿರ ಕೋಟಿ ನೀಡಲಾಗುತ್ತಿದೆ.
- ಮಹಾರಾಷ್ಟ್ರಕ್ಕೆ ನೀಡಿದಂತೆ ನಮಗೂ ಮ್ಯಾಚಿಂಗ್ ಗ್ರಾಂಟ್ ಕೊಡಲಿ.
- ಕರ್ನಾಟಕದ ಋಣವಂತೂ ತೀರಿಸಲಿಲ್ಲ, ಹೀಗಾದರೂ ಋಣ ತೀರಿಸಿ.”