
Delhi: ಪಹಲ್ಗಾಮ್ ನಲ್ಲಿ ಉಗ್ರರು ಮಾಡಿದ ದಾಳಿಗೆ ಪ್ರತೀಕಾರವಾಗಿ ಭಾರತವು “ಆಪರೇಷನ್ ಸಿಂಧೂರ್” (Operation Sindoor) ಅನ್ನು ಯಶಸ್ವಿಯಾಗಿ ನಡೆಸಿದೆ. ಹಿಂದೂ ಮಹಿಳೆಯರ ಸಿಂಧೂರನ್ನು ಅವಮಾನಿಸಿದ ಉಗ್ರರ ಕೃತ್ಯಕ್ಕೆ ಉತ್ತರವಾಗಿ, ಭಾರತವು ಪಾಕಿಸ್ತಾನ ಮತ್ತು ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ)ದಲ್ಲಿನ 9 ಉಗ್ರರ ಅಡಗುತಾಣಗಳನ್ನು ವಾಯು ದಾಳಿ ಮೂಲಕ ನಾಶಪಡಿಸಿದೆ.
ಪಾಕಿಸ್ತಾನವು “ದಾಳಿ ಮಾಡಿದ್ರೆ ನಾವೇನೂ ಸುಮ್ಮನಿರ್ತೀವಾ?” ಅಂತ ಹೆಮ್ಮೆಪಟ್ಟು ಮಾತನಾಡುತ್ತಿತ್ತು. ಆದರೆ ಭಾರತವು ದಾಳಿಯ ಸಮಯ, ಸ್ಥಳ ಇತ್ಯಾದಿ ಬಗ್ಗೆ ಯಾವುದೇ ಮಾಹಿತಿ ಕೊಡುವದಿಲ್ಲದೇ ಪಾಕಿಸ್ತಾನಕ್ಕೆ ಆಘಾತ ನೀಡಿದೆ. ಈ ದಾಳಿಯಲ್ಲಿ ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರ ನೆಲೆಗಳು ಧ್ವಂಸವಾಗಿದೆ ಎಂಬ ಸುದ್ದಿ ಹರಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತುರ್ತು ಸಭೆಗೂ ಕರೆದಿದ್ದಾರೆ.
ಭಾರತವು ಎಚ್ಚರಿಕೆ ನೀಡಿದಂತೆ ಕಾರ್ಯಪಡೆದಿದ್ದು, ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಿದೆ. ಪಾಕಿಸ್ತಾನ ಭಾರತದ ವಿರುದ್ಧ ಉಗ್ರರ ದಾಳಿಯನ್ನು ಹೆಮ್ಮೆಯಿಂದ ಪ್ರೋತ್ಸಾಹಿಸುತ್ತಿದ್ದರೂ, ಈಗ ಅದು ತೀವ್ರ ಸಂಕಟಕ್ಕೆ ಸಿಲುಕಿದೆ.
ಪಹಲ್ಗಾಮ್ ದಾಳಿಯಿಂದ ಎರಡು ವಾರಗಳ ನಂತರ, ಏಪ್ರಿಲ್ 22 ರಂದು ಭಾರತವು ಮೇ 7 ರಂದು ದೇಶಾದ್ಯಂತ ಅಣಕು ಅಭ್ಯಾಸ ನಡೆಯಲಿದೆ ಎಂದು ಘೋಷಿಸಿತ್ತು. ಆದರೆ ಪಾಕಿಸ್ತಾನ ಊಹಿಸುತ್ತಿದ್ದ ದಿನಕ್ಕಿಂತ ಮುಂಚೆಯೇ ದಾಳಿ ನಡೆದಿದೆ. ಇದರಿಂದಾಗಿ ಪಾಕಿಸ್ತಾನ ಬಿಕ್ಕಟ್ಟಿಗೆ ಸಿಲುಕಿದೆ.
ವಾಯುಪಡೆಯ ಪ್ರಕಾರ, ಈ ದಾಳಿಯಲ್ಲಿ 9 ಅಡಗುತಾಣಗಳು ಸಂಪೂರ್ಣ ನಾಶವಾಗಿದ್ದು, ಸುಮಾರು 50 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ದಾಳಿಯ ನಂತರ ಹಲವಾರು ಕಟ್ಟಡಗಳು ಹಾನಿಗೊಂಡಿದ್ದು, ಸ್ಥಳೀಯ ಜನರಲ್ಲಿ ಭೀತಿಯ ವಾತಾವರಣವಿದೆ.
ಇದು ಪಹಲ್ಗಾಮ್ ದಾಳಿಗೆ ನೀಡಿರುವ ಭಾರತದ ಸ್ಪಷ್ಟ ಮತ್ತು ಬುದ್ಧಿವಂತ ಪ್ರತಿಕ್ರಿಯೆ.