Karwar (Uttara Kannada): ಇತ್ತೀಚೆಗೆ ಕಾರವಾರ ಬಂದರಿಗೆ (Karwar port) ಬಂದ ಇರಾಕ್ ಮೂಲದ ಸರಕು ಸಾಗಣೆ ಹಡಗಿನಲ್ಲಿ ಪಾಕಿಸ್ತಾನ ಹಾಗೂ ಸಿರಿಯಾ ಮೂಲದ ಪ್ರಯಾಣಿಕರು ಆಗಮಿಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅವರ ಮೇಲೆ ಬಂದರಿನಲ್ಲಿಯೇ ನಿರ್ಬಂಧ ಹೇರಲಾಗಿತ್ತು ಮತ್ತು ಅವರನ್ನು ಹಡಗಿನಲ್ಲಿಯೇ ವಾಪಸ್ ಕಳುಹಿಸಲಾಯಿತು.
ಈ ಹಡಗು ಇರಾಕ್ನ ಅಲ್ ಜುಬೇರ್ನಿಂದ ಬಿಟುಮಿನ್ ತುಂಬಿಕೊಂಡು ಕಾರವಾರಕ್ಕೆ ಆಗಮಿಸಿತ್ತು. ಇದರಲ್ಲಿ ಪಾಕಿಸ್ತಾನದ ಒಬ್ಬ, ಭಾರತ ಮೂಲದ 15 ಮತ್ತು ಸಿರಿಯಾದ ಇಬ್ಬರು ಇದ್ದರು. ಅವರು ಹಡಗಿನಲ್ಲಿ ಎರಡು ದಿನ ಕಾಲವಿದ್ದರು. ಈ ಮಾಹಿತಿಯನ್ನು ಬಂದರು ಅಧಿಕಾರಿಗಳು ಕರಾವಳಿ ಕಾವಲುಪಡೆಗೆ ತಿಳಿಸಿದ್ದರು.
ಪೊಲೀಸರು ಪಾಕಿಸ್ತಾನ ಹಾಗೂ ಸಿರಿಯಾ ಪ್ರಜೆಗಳ ದಾಖಲೆ ಪರಿಶೀಲನೆ ಮಾಡಿ, ವಿಚಾರಣೆ ನಡೆಸಿದರು. ನಂತರ, ಹಡಗಿನ ಕ್ಯಾಪ್ಟನ್ ಮೂಲಕ ಅವರ ಮೊಬೈಲ್ಗಳನ್ನು ಜಪ್ತಿ ಮಾಡಲಾಗಿತ್ತು ಮತ್ತು ಬಂದರಿಗೆ ಇಳಿಯದಂತೆ ಸೂಚನೆ ನೀಡಲಾಯಿತು.
ಬುಧವಾರ ಸರಕುಗಳನ್ನು ಇಳಿಸುವ ಕೆಲಸ ಮುಗಿದ ನಂತರ, ಅವರನ್ನೆಲ್ಲಾ ಅದೇ ಹಡಗಿನಲ್ಲಿ ವಾಪಸ್ ಕಳುಹಿಸಲಾಯಿತು. ಪಹಲ್ಗಾಮ್ ದಾಳಿ ನಂತರ, ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಮತ್ತು ಚೀನಾದ ಹಡಗುಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಸಾಮಾನ್ಯವಾಗಿ ಬೇರೆಯೊಂದು ದೇಶದಿಂದ ಬರುವ ಹಡಗುಗಳಲ್ಲಿ ವಿವಿಧ ದೇಶಗಳ ಜನರು ಇರುತ್ತಾರೆ. ಆದರೆ ಅವರು ಹಡಗಿನಿಂದ ಇಳಿಯುವ ಅನುಮತಿ ಇರುತ್ತಿಲ್ಲ. ಇದೇ ರೀತಿಯಲ್ಲಿ, ಪಾಕಿಸ್ತಾನ ಹಾಗೂ ಸಿರಿಯಾದ ನಾಗರಿಕರಿಗೂ ಇಳಿಯದಂತೆ ಸೂಚನೆ ನೀಡಲಾಗಿದೆ.
“ಇರಾಕ್ನಿಂದ ಬಂದ ಹಡಗಿನಲ್ಲಿ ಪಾಕ್ ಮತ್ತು ಸಿರಿಯಾದ ಜನರು ಇದ್ದರು. ಅವರಿಗೆ ಮೊಬೈಲ್ ಬಳಸದಂತೆ ಸೂಚನೆ ನೀಡಿ, ಅವರನ್ನು ವಾಪಸ್ ಕಳುಹಿಸಲಾಗಿದೆ. ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ.”