back to top
21.9 C
Bengaluru
Tuesday, January 13, 2026
HomeEnvironmentRain forecast: ರಾಜ್ಯದ ಹಲವೆಡೆಗೆ ಎಚ್ಚರಿಕೆ ಘೋಷಣೆ

Rain forecast: ರಾಜ್ಯದ ಹಲವೆಡೆಗೆ ಎಚ್ಚರಿಕೆ ಘೋಷಣೆ

- Advertisement -
- Advertisement -

ಕೆಲವು ದಿನಗಳ ವಿಶ್ರಾಂತಿಯ ಬಳಿಕ ಮುಂಗಾರು ಮಳೆ (Rain forecast) ಮತ್ತೆ ಚುರುಕಾಗಿದೆ. ಆಗಸ್ಟ್ 7ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ.

ಆರೆಂಜ್ ಅಲರ್ಟ್ ನೀಡಿರುವ ಜಿಲ್ಲೆಗಳು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಹಾಗೂ ಶಿವಮೊಗ್ಗ.

ಯೆಲ್ಲೋ ಅಲರ್ಟ್ ಘೋಷಿಸಿರುವ ಜಿಲ್ಲೆಗಳು: ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ವಿಜಯನಗರ, ಯಾದಗಿರಿ, ರಾಯಚೂರು.

ಕುಂದಾಪುರ, ಗೇರುಸೊಪ್ಪ, ಆಗುಂಬೆ, ಉಡುಪಿ, ಶಿರಾಲಿ, ಧರ್ಮಸ್ಥಳ, ಶೃಂಗೇರಿ, ಸಿದ್ದಾಪುರ, ಕುಮಟಾ, ಕೊಟ್ಟಿಗೆಹಾರ, ಕಾರ್ಕಳ, ಕೋಟಾ, ಮಂಕಿ, ಕೃಷ್ಣರಾಜಪೇಟೆ, ಕಮ್ಮರಡಿ, ಹಾವೇರಿ, ಬೇಳೂರು, ಬನವಾಸಿ, ಉಪ್ಪಿನಂಗಡಿ, ಹೊನ್ನಾವರ, ಗೋಕರ್ಣ, ಕ್ಯಾಸಲ್ರಾಕ್ ಮತ್ತು ಭಾಗಮಂಡಲದಲ್ಲಿ ಭಾನುವಾರ ಮಳೆಯಾಗಿದೆ.

ಭಾನುವಾರ ರಾತ್ರಿ ಮಳೆ ಆರಂಭವಾಗಿದೆ. ಈ ಹೊತ್ತಿಗೆ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉಷ್ಣಾಂಶ ವಿವರಗಳು

  • ಬೆಂಗಳೂರು ನಗರ: ಗರಿಷ್ಠ 29.5°C, ಕನಿಷ್ಠ 21.5°C
  • ಹೆಚ್‌ಎಎಲ್: ಗರಿಷ್ಠ 29.7°C, ಕನಿಷ್ಠ 21.1°C
  • ಕೆಂಪೇಗೌಡ ವಿಮಾನ ನಿಲ್ದಾಣ: ಗರಿಷ್ಠ 30.5°C, ಕನಿಷ್ಠ 21.4°C

ಸುರಕ್ಷತೆಗಾಗಿ ಸೂಚನೆ: ಪ್ರಜೆಗಳು ಎಚ್ಚರಿಕೆಯಿಂದಿರಬೇಕು. ಅಗತ್ಯವಿಲ್ಲದೆ ಹೊರ ಹೋಗದೆ ಮಳೆಯ ಬಗ್ಗೆ ಮುನ್ಸೂಚನೆಗಳನ್ನು ಗಮನಿಸಬೇಕು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page