ಪಾಕ್ ಆಕ್ರಮಿತ ಕಾಶ್ಮೀರ (PoK) ನಲ್ಲಿರುವವರು ಭಾರತದವರೇ ಆಗಿದ್ದಾರೆ ಎಂದು ರಕ್ಷಣಾ ಸಚಿವ Rajnath singh ಗುರುವಾರ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ CII ವಾರ್ಷಿಕ ಬಿಸಿನೆಸ್ ಸಮಿಟ್ 2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“PoK ನ ಜನರು ಭಾರತೀಯರೇ. ಬಹುತೇಕರು ಭಾರತವನ್ನು ಆಂತರಿಕವಾಗಿ ಸಂಪರ್ಕಿಸಿರುವವರಾಗಿದ್ದಾರೆ. ಕೆಲವರನ್ನು ಮಾತ್ರ ದಾರಿ ತಪ್ಪಿಸಲಾಗಿದೆ,” ಎಂದು ಅವರು ಹೇಳಿದರು. “ನಮ್ಮಿಂದ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ದೂರವಿರುವ ತಮ್ಮ ಸಹೋದರರು ಕೂಡ ಒಂದು ದಿನ ಭಾರತಕ್ಕೆ ಮರಳುತ್ತಾರೆ ಎಂಬ ನಂಬಿಕೆ ನಮಗಿದೆ,” ಎಂದು ಅವರು ಪುನರುಚಿಸಿದರು.
“ಭಾರತ ಎಂದಿಗೂ ಹೃದಯಗಳನ್ನು ಸಂಪರ್ಕಿಸುವ ಬಗ್ಗೆ ಮಾತನಾಡುತ್ತದೆ. ಪ್ರೀತಿ, ಏಕತೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ಮೂಲಕ, ‘ನಾನು ಭಾರತವಲ್ಲವೇ? ನಾನು ಮರಳಿದ್ದೇನೆ’ ಎಂಬ ದಿನ ದೂರವಿಲ್ಲ,” ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ರಕ್ಷಣಾ ಸಾಮರ್ಥ್ಯವನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, “ಆಪರೇಶನ್ ಸಿಂಧೂರ ವೇಳೆ ನಮ್ಮ ದೇಶೀಯ ತಂತ್ರಜ್ಞಾನಗಳು ಜಗತ್ತನ್ನೇ ಬೆಚ್ಚಿಬೀಳಿಸಿದವು. ಶತ್ರುಗಳ ಬೃಹತ್ವಾಹಿನಿಯೂ ನಮ್ಮ ಶಕ್ತಿಗೆ ತಡೆಯಾಗಲಿಲ್ಲ ಎಂಬುದು ಸಾಬೀತಾಗಿದೆ,” ಎಂದು ಹೇಳಿದರು. “ನಾವು ಇನ್ನೂ ಹೆಚ್ಚು ಕಠಿಣವಾಗಿ ಪ್ರತಿಸ್ಪಂದಿಸಬಹುದಿತ್ತು. ಆದರೆ ಶಕ್ತಿಯ ಜೊತೆಗೆ ನಿಯಂತ್ರಣವೂ ಮುಖ್ಯವಾಗಿದೆ,” ಎಂದು ತಿಳಿಸಿದರು.
“ಇಂದಿನ ಭಾರತ ಕೇವಲ ಯುದ್ಧವಿಮಾನ, ಕ್ಷಿಪಣಿ ವ್ಯವಸ್ಥೆಗಳನ್ನಷ್ಟೇ ನಿರ್ಮಿಸುತ್ತಿಲ್ಲ. ಬದಲಿಗೆ ನವಯುಗದ ಯುದ್ಧ ತಂತ್ರಜ್ಞಾನಕ್ಕೂ ಸಜ್ಜಾಗುತ್ತಿದೆ,” ಎಂದು ಅವರು ವಿವರಿಸಿದರು.
“ಆಪರೇಶನ್ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಕೃತಕ ಬುದ್ಧಿಮತ್ತೆ, ಸೈಬರ್ ರಕ್ಷಣಾ, ಅನ್ಮ್ಯಾನ್ಡ್ ಸಿಸ್ಟಮ್ಸ್ ಹಾಗೂ ಬಾಹ್ಯಾಕಾಶ ಆಧಾರಿತ ಭದ್ರತಾ ಕ್ಷೇತ್ರಗಳಲ್ಲಿ ಭಾರತ ಈಗ ವಿಶ್ವದ ಗಮನ ಸೆಳೆಯುತ್ತಿದೆ,” ಎಂದರು.
ಪಾಕಿಸ್ತಾನವನ್ನು ಉದ್ದೇಶಿಸಿ ಕಿಡಿಕಾರಿದ ಅವರು, “ಭಯೋತ್ಪಾದನೆ ನಡೆಸುವುದು ಲಾಭದಾಯಕ ವ್ಯವಹಾರವಲ್ಲ. ಇದರ ಬೆಲೆ ಪಾಕಿಸ್ತಾನ ಇಂದು ಕಟ್ಟುತ್ತಿದೆ,” ಎಂದು ಆರೋಪಿಸಿದರು.
“ಭಾರತದ ಭಯೋತ್ಪಾದನೆ ವಿರುದ್ಧದ ತಂತ್ರಗಳನ್ನೂ ನಾವು ಸಂಪೂರ್ಣವಾಗಿ ಪುನರ್ವಿಮರ್ಶೆ ಮಾಡಿದ್ದೇವೆ. ಈಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುವುದಾದರೆ, ಅದು ಕೇವಲ ಭಯೋತ್ಪಾದನೆ ಮತ್ತು PoK ಬಗ್ಗೆ ಮಾತ್ರವೇ ನಡೆಯುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.
For Daily Updates WhatsApp ‘HI’ to 7406303366
Image: PTI