back to top
20.5 C
Bengaluru
Friday, July 25, 2025
HomeKarnatakaSC ಒಳಮೀಸಲಾತಿ ಸಮೀಕ್ಷೆ ಕಾಂತರಾಜು ವರದಿಗೆ ಸಂಬಂಧಪಟ್ಟದ್ದಲ್ಲ: Minister Mahadevappa ಸ್ಪಷ್ಟನೆ

SC ಒಳಮೀಸಲಾತಿ ಸಮೀಕ್ಷೆ ಕಾಂತರಾಜು ವರದಿಗೆ ಸಂಬಂಧಪಟ್ಟದ್ದಲ್ಲ: Minister Mahadevappa ಸ್ಪಷ್ಟನೆ

- Advertisement -
- Advertisement -

Bengaluru: ಕರ್ನಾಟಕ ಸರ್ಕಾರ ಎಸ್ಸಿ (ಪರಿಶಿಷ್ಟ ಜಾತಿ) ಒಳ ಮೀಸಲಾತಿಗೆ (SC internal reservation) ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಮುಂದಾಗಿದೆ. ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಸಚಿವ HC ಮಹದೇವಪ್ಪ (Minister Mahadevappa) ಅವರು, “ಇದು ಕಾಂತರಾಜು ವರದಿಗೆ ಸಂಬಂಧಿಸಿದುದಲ್ಲ. ಇವು ಎರಡು ವಿಭಿನ್ನ ವಿಷಯಗಳು,” ಎಂದು ಸ್ಪಷ್ಟಪಡಿಸಿದ್ದಾರೆ.

ಸಮಾಜದ ಪರಿಶಿಷ್ಟ ಜಾತಿ ಸಮುದಾಯದ ಅಂಕಿ-ಅಂಶಗಳನ್ನು ಸಂಗ್ರಹಿಸಿ, ನಿಖರವಾದ ಒಳಮೀಸಲಾತಿ ನಿರ್ಧಾರಕ್ಕೆ ತಲುಪುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈ ಡೇಟಾ ಎಂಪಿರಿಕಲ್ ಆಗಿದ್ದು, ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ. ಎಡಗೈ ಮತ್ತು ಬಲಗೈ ನಾಯಕರೂ ಈ ಸಮೀಕ್ಷೆಗೆ ಬೆಂಬಲ ನೀಡಿದ್ದಾರೆ.

ಸಮೀಕ್ಷೆಗೆ ಅಂದಾಜು ₹100 ಕೋಟಿ ರೂ. ಖರ್ಚಾಗಲಿದೆ. ಇದು ಐತಿಹಾಸಿಕ ಮಹತ್ವವಿರುವ ಸಮೀಕ್ಷೆ ಆಗಿದ್ದು, 101 ವಿವಿಧ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಪತ್ತೆಹಚ್ಚುವುದು ಮುಖ್ಯ ಉದ್ದೇಶವಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮಾತನಾಡಿ, “ಜಾತಿಗಣತಿ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಆದರೆ ಯಾವುದೇ ಪಕ್ಷದ ದೃಷ್ಟಿಕೋಣ ಇಲ್ಲ. ಜಾತಿಗಣತಿಯಲ್ಲಿ ಜಾತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಂಶಗಳೂ ಸೇರಬೇಕು,” ಎಂದಿದ್ದಾರೆ.

ಸಾರಾಂಶ

  • ಈ ಸಮೀಕ್ಷೆ ಎಸ್ಸಿ ಸಮುದಾಯಕ್ಕೆ ಮಾತ್ರವಾಗಿ ನಡೆಯುತ್ತಿದೆ.
  • ಕಾಂತರಾಜು ವರದಿಗೆ ಯಾವುದೇ ಸಂಬಂಧ ಇಲ್ಲ.
  • ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಮೀಕ್ಷೆ ನಡೆಯುತ್ತಿದೆ.
  • 1996ರ ಸಮೀಕ್ಷೆ ಕೂಡ ನ್ಯಾಯಾಲಯದಿಂದ ಅಂಗೀಕಾರವಾಗಿದೆ.
- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page