back to top
19.5 C
Bengaluru
Wednesday, November 12, 2025
HomeKarnatakaChikkaballapuraಸಚಿವ ಸ್ಥಾನಕ್ಕೆ SN Subbareddy ಆಗ್ರಹ

ಸಚಿವ ಸ್ಥಾನಕ್ಕೆ SN Subbareddy ಆಗ್ರಹ

- Advertisement -
- Advertisement -

Chikkaballapur: ಕಾಂಗ್ರೆಸ್ ಪಕ್ಷದಲ್ಲಿ (Congress party) ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ವಿಚಾರವಾಗಿ ಹೇಳಿಕೆ, ಪ್ರತಿ ಹೇಳಿಕೆಗಳು ಕೇಳಿಬರುತ್ತಿದ್ದರೆ ನಡುವೆ, ಸಚಿವ ಸ್ಥಾನ ಆಕಾಂಕ್ಷಿಗಳ ಅಸಮಾಧಾನಗಳು ವ್ಯಕ್ತವಾಗತೊಡಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್ಎನ್ ಸುಬ್ಬಾರೆಡ್ಡಿ, (SN Subbareddy) ತಮಗೆ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ. “ನಾನು ಹಿರಿಯ ಶಾಸಕ, ನನಗೆ ಸಚಿವ ಸ್ಥಾನ ಕೇಳಲು ಹಕ್ಕಿದೆ,” ಎಂದು ಅವರು ಹೇಳಿದ್ದಾರೆ. ಬಾಗೇಪಲ್ಲಿಯಿಂದ ಇಂದಿನವರೆಗೂ ಯಾರೂ ಸಚಿವರಾಗಿಲ್ಲ. “ಅಪರೇಷನ್ ಕಮಲದ ಸಮಯದಲ್ಲಿ ಬಿಜೆಪಿ ನನಗೆ ಸಚಿವ ಸ್ಥಾನದ ಆಫರ್ ನೀಡಿತ್ತು, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿದ್ದೆ,” ಎಂದು ಅವರು ನೆನಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಬಳಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದರೂ, ಹೈಕಮಾಂಡ್ ಸಂಪುಟ ಪುನಾರಚನೆಗೆ ಸದ್ಯ ಗ್ರೀನ್ ಸಿಗ್ನಲ್ ನೀಡಿಲ್ಲ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ವಿವಾದದ ನಡುವೆ, ಸಚಿವ ಸ್ಥಾನದ ಬೇಡಿಕೆಗಳು ಮತ್ತಷ್ಟು ಗಟ್ಟಿ ಆಗುತ್ತಿವೆ.

ಈ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ಒಳಗಿನ ಅಸಮಾಧಾನಗಳನ್ನು ಹೆಚ್ಚಿಸಬಹುದಾದ ಶಂಕೆ ಇದೆ. ಪಕ್ಷದ ಮುಂದಿನ ನಿರ್ಧಾರವು ಮಹತ್ವದಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page