ಜಮ್ಮು ಮತ್ತು ಕಾಶ್ಮೀರದ ಕೆಲವು (Jammu and Kashmir) ಪ್ರಮುಖ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ (Terrorist threat) ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಶ್ರೀನಗರ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲುಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಈ ಜೈಲುಗಳಲ್ಲಿ ಕೆಲ ಭಯೋತ್ಪಾದಕರು ಹಾಗೂ ಭೂಗತ ಅಪರಾಧಿಗಳು ಇರೋದರಿಂದ, ಅವರು ನೇರವಾಗಿ ದಾಳಿಯಲ್ಲಿ ಭಾಗಿಯಾಗದೇ ಇದ್ದರೂ, ದಾಳಿಕೋರರಿಗೆ ಆಶ್ರಯ, ಲಾಜಿಸ್ಟಿಕ್ ಸಹಾಯ ಅಥವಾ ಓಡಾಟದಲ್ಲಿ ನೆರವು ನೀಡುವ ಸಾಧ್ಯತೆ ಇದೆ.
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಇತ್ತೀಚೆಗೆ ನಿಸಾರ್ ಮತ್ತು ಮುಷ್ತಾಕ್ ಎಂಬ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದೆ. ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಲಷ್ಕರ್-ಎ-ತೊಯ್ಬಾ ಸಂಘಟನೆಯ ಟಿಆರ್ಎಫ್ ಹೊಣೆ ಹೊತ್ತಿತ್ತು.
ದಾಳಿಯ ಆತಂಕ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. 2023 ಅಕ್ಟೋಬರ್ನಲ್ಲಿ CRPF ಬದಲು CISF ಜೈಲು ಭದ್ರತೆ ವಹಿಸಿಕೊಂಡಿತ್ತು.
ಇದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಚೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮವಾಗಿದೆ.