Thane (Maharashtra): ಇತ್ತೀಚೆಗೆ ಪಾಕಿಸ್ತಾನದ ಗುಪ್ತಚರರಿಗೆ ಮಾಹಿತಿ ನೀಡಿದ ಹಲವು ಆರೋಪಿಗಳನ್ನು ಭಾರತದಲ್ಲಿ ಬಂಧಿಸಲಾಗಿದೆ. ಇಂತಹದೊಂದರಲ್ಲಿ, ಭಯೋತ್ಪಾದನೆ ನಿಗ್ರಹ ದಳವು ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 27 ವರ್ಷದ ಎಂಜಿನಿಯರ್ (Engineer) ರವಿ ಮುರಳೀಧರ್ ವರ್ಮಾ ರನ್ನು ಬಂಧಿಸಿದೆ.
ಅವರು ಕಲ್ವಾದಲ್ಲಿ ವಾಸಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಹುಡುಗಿಯ ಖಾತೆಯಿಂದ ಹನಿಟ್ರ್ಯಾಪ್ ಮೂಲಕ ಸಿಲುಕಿದ್ದರು. ಬಳಿಕ ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕ ಬೆಳೆಸಿಕೊಂಡು, ಮುಂಬೈ ಮತ್ತು ಥಾಣೆ ಪ್ರದೇಶಗಳ ಬಗ್ಗೆ ಫೋಟೋ ಮತ್ತು ವಿಡಿಯೋ ಮೂಲಕ ಗುಪ್ತ ಮಾಹಿತಿ ಪಾಕಿಸ್ತಾನಕ್ಕೆ ರವಾನೆ ಮಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಮುಂಬೈನ ಖಾಸಗಿ ಕಂಪನಿಯಲ್ಲಿ ರಕ್ಷಣಾ ತಂತ್ರಜ್ಞಾನ ವಿಭಾಗದಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವರ ವಿರುದ್ಧ ಭಯೋತ್ಪಾದನಾ ಕಾನೂನಿನಡಿ ಕೇಸ್ ದಾಖಲಾಗಿದೆ ಮತ್ತು ಮುಂದಿನ ತನಿಖೆ ನಡೆಯುತ್ತಿದೆ.