Home Karnataka Bengaluru Urban ವೇಣುಗೋಪಾಲಸ್ವಾಮಿ ರಥೋತ್ಸವ

ವೇಣುಗೋಪಾಲಸ್ವಾಮಿ ರಥೋತ್ಸವ

0
Bengaluru Anekal Venugopalaswamy Temple Jathre

Anekal, Bengaluru Rural : ಆನೇಕಲ್‌ನ ಕಲ್ಯಾಣ ಮಂಟಪ ರಸ್ತೆಯಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಜಾತ್ರೆಯ (Venugopalaswamy Temple Jathre) ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯ ರಥೋತ್ಸವವನ್ನು ನಡೆಸಲಾಯಿತು.

ಪಟ್ಟಣದ ತ್ಯಾಗರಾಜ ರಸ್ತೆ, ಥಳೀ ರಸ್ತೆಗಳಲ್ಲಿ ಉತ್ಸವವು ಸಾಗಿತು. ರಥೋತ್ಸವದ ಅಂಗವಾಗಿ ಹನುಮಂತೋತ್ಸವ, ಪೂಲಂಗಿ ಉತ್ಸವ, ಶೇಷ ವಾಹನೋತ್ಸವ, ಕಲ್ಯಾಣೋತ್ಸವ, ಪ್ರಾಕಾರೋತ್ಸವ, ಶ್ರೀಗಂಧೋತ್ಸವ ಆಯೋಜಿಸಲಾಗಿತ್ತು. ಬೆಳಗಿನಿಂದಲೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯು ಮನೆ ಮನೆಗಳ ಬಳಿ ಬರುತ್ತಿದ್ದಂತೆ ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿದರು.

ದೇವಾಲಯದ ಪ್ರಧಾನ ಅರ್ಚಕ ಶಿವರಾಂ ಶ್ರೀನಾಥಭಟ್ಟರ್‌, ಉಮೇಶ್‌ ಶಾಸ್ತ್ರಿ, ರಾಮಚಂದ್ರ ಭಟ್ಟರ್‌, ಗೋವಿಂದಭಟ್ಟರ್ ಸುಬ್ರಮಣಿ ಶಾಸ್ತ್ರಿಗಳು ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷೆ ಮಾಲಾ ಭಾರ್ಗವ, ಸದಸ್ಯರಾದ ಬಿ.ನಾಗರಾಜು, ಅನಿತಾ ವೆಂಕಟೇಶ್, ಅನುಸೂಯ ಗೋಪಾಲ್‌, ಮುಖಂಡರಾದ ನಂಜುಂಡೇಶ್ವರ, ಅಚ್ಯುತರಾವ್‌, ನಾಗೇಂದ್ರ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version