Home Karnataka Bengaluru Rural ಮುಖ್ಯಮಂತ್ರಿಗಳಿಂದ ಕೆಂಪೇಗೌಡರ ಕಂಚಿನ ಪುತ್ಥಳಿ ಕಾಮಗಾರಿ ಪರಿಶೀಲನೆ

ಮುಖ್ಯಮಂತ್ರಿಗಳಿಂದ ಕೆಂಪೇಗೌಡರ ಕಂಚಿನ ಪುತ್ಥಳಿ ಕಾಮಗಾರಿ ಪರಿಶೀಲನೆ

Devanahalli 108 Feet Kempegowda Bronze Statue

Devanahalli : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport Bengaluru) ಬಳಿ ನಿರ್ಮಿಸಲಾಗುತ್ತಿರುವ ಸೆಂಟ್ರಲ್‌ ಪಾರ್ಕ್‌ (Central Park) ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ (Nadaprabhu Kempegowda Bronze Statue) ಕಾಮಗಾರಿಯನ್ನು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಪರಿಶೀಲಿಸಿದರು.

ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು 23 ಎಕರೆ ವಿಸ್ತೀರ್ಣದ ಸೆಂಟ್ರಲ್‌ ಪಾರ್ಕ್‌ ಕಾಮಗಾರಿಗೆ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೂಮಿ‌ಪೂಜೆ ನೆರವೇರಿಸಿದ್ದರು.

ಪ್ರತಿಮೆಯ ನಿರ್ಮಾಣವನ್ನು ಉತ್ತರ ಪ್ರದೇಶದ ನೋಯಿಡಾದ ಖ್ಯಾತ ಕಲಾವಿದ ರಾಮಸುತಾರ ಅವರು ಮಾಡುತ್ತಿದ್ದು, ಶೀಘ್ರವೇ ಲೋರ್ಕಾರ್ಪಣೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version