Home Karnataka ED ದಾಳಿ: ಸಂಪರ್ಕಕ್ಕೆ ಸಿಗದ Satish Sail

ED ದಾಳಿ: ಸಂಪರ್ಕಕ್ಕೆ ಸಿಗದ Satish Sail

Congress MLA Satish Krishna Sail

Karwar: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Congress MLA Satish Krishna Sail) ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಬುಧವಾರ ಬೆಳಗ್ಗೆವರೆಗೆ ದಾಳಿ ನಡೆಸಿದರು. ಬೆಳಗಿನ 4 ಗಂಟೆಯವರೆಗೆ ಶೋಧ ಕಾರ್ಯ ನಡೆಯಿತು.

ದಾಳಿ ಮುಗಿದ ತಕ್ಷಣ ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಾರಿಗೂ ಸಂಪರ್ಕವಾಗದಂತಾಗಿದೆ.

ಇಡಿ ಅಧಿಕಾರಿಗಳು ಶಾಸಕರ ಅತ್ತೆಯ ಸಮ್ಮುಖದಲ್ಲಿ ಮನೆ ಪರಿಶೀಲಿಸಿದರು. 22 ಗಂಟೆಗಳ ಕಾಲ ಶೋಧ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡರು.

ಆಪ್ತರು ಮತ್ತು ಗನ್‌ಮ್ಯಾನ್‌ ಮೂಲಕ ಸಂಪರ್ಕಿಸಲು ಯತ್ನಿಸಲಾದರೂ, ಸತೀಶ್ ಸೈಲ್ ಸಂಪರ್ಕಕ್ಕೆ ಬಂದಿಲ್ಲ. ಅಂಗರಕ್ಷಕರು, “ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದರು, ನಂತರ ಕರೆ ಮಾಡಿಲ್ಲ” ಎಂದು ಇಡಿಗೆ ತಿಳಿಸಿದ್ದಾರೆ.

ಸತೀಶ್ ಸೈಲ್ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. 2010ರಿಂದ ಬೆಲಿಕೇರಿ ಬಂದರು ಮೂಲಕ ನಡೆದ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಅವರು ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸಿಬಿಐ ಮತ್ತು ಲೋಕಾಯುಕ್ತ ತನಿಖೆಗೂ ಗುರಿಯಾಗಿದ್ದರು. ಪ್ರಕರಣ ಹೈಕೋರ್ಟ್ ವಿಚಾರಣೆ ಹಂತದಲ್ಲಿರುವಾಗಲೇ, ಇಡಿಗೊಂದಿಗೆ ಮತ್ತೆ ದಾಳಿ ಎದುರಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version