Home Karnataka MUDA Case: CM Siddaramaiah ಅರ್ಜಿ ವಜಾ, ಪ್ರತಿಪಕ್ಷ ರಾಜೀನಾಮೆಗೆ ಪಟ್ಟು

MUDA Case: CM Siddaramaiah ಅರ್ಜಿ ವಜಾ, ಪ್ರತಿಪಕ್ಷ ರಾಜೀನಾಮೆಗೆ ಪಟ್ಟು

124
MUDA scam Karnataka HC upholds Governor’s nod

Bengaluru: ಮುಡಾ ಹಗರಣದಲ್ಲಿ (MUDA Case) ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (Chief minister Siddaramaiah) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾ ಮಾಡಿದೆ. ರಾಜ್ಯಪಾಲರ (Governor) ಕ್ರಮವನ್ನು ಎತ್ತಿಹಿಡಿದಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದೆ.

ಕಳೆದ ಒಂದು ತಿಂಗಳಿಂದ ವಾದ ವಿವಾದ ಆಲಿಸಿ ಹೈಕೋರ್ಟ್ನ (High Court) ಎಂ ನಾಗಪ್ರಸನ್ನ (M Nagaprasanna)ಅವರ ಏಕ ಸದಸ್ಯ ಪೀಠವು ಮಂಗಳವಾರ ತೀರ್ಪು ಪ್ರಕಟಿಸಿದೆ. ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ನೀಡಿರುವ ಅನುಮತಿ ಸರಿಯಾಗಿದೆ. ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿಯಲ್ಲಿ (BJP) ಸಂತಸ ಮನೆ ಮಾಡಿದೆ. ಮುಂದಿನ ಹೋರಾಟ ಪ್ರಕಟಕ್ಕೆ ಬಿಜೆಪಿ ಮುಂದಾಗಿದ್ದು, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (B.Y.Vijayendra) ತುರ್ತು ಸುದ್ದಿಗೋಷ್ಠಿ ನಡೆಸಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನವರೆಗೂ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page