back to top
24.1 C
Bengaluru
Saturday, April 19, 2025
HomeIndiaChhattisgarh ದಲ್ಲಿ ಎರಡು Encounters– 22 ನಕ್ಸಲರ ಹತ್ಯೆ

Chhattisgarh ದಲ್ಲಿ ಎರಡು Encounters– 22 ನಕ್ಸಲರ ಹತ್ಯೆ

- Advertisement -
- Advertisement -

Chhattisgarh: ಭದ್ರತಾ ಪಡೆಗಳು ಇಂದು ಬಿಜಾಪುರ ಹಾಗೂ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ encounter ಗಳಲ್ಲಿ 22 ನಕ್ಸಲರನ್ನು (Naxals) ಹತ್ಯೆ ಮಾಡಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಾಗಿದೆ. encounter ಸ್ಥಳದಿಂದ 22 ನಕ್ಸಲರ ಮೃತದೇಹಗಳು ಹಾಗೂ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬಿಜಾಪುರ ಡಿಆರ್ಜಿಯ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ.

encounter ಬಳಿಕ ಎಕೆ-47, ಎಸ್ಎಲ್ಆರ್ ಮುಂತಾದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲೈಟ್ ಕಮಾಂಡರ್ ಪಾಪ ರಾವ್ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದಾನೆ. ಸೈನಿಕರು ಸುಮಾರು 40-45 ನಕ್ಸಲರನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದಾರೆ.

ಬಿಜಾಪುರದ ಗಂಗಲೂರಿನಲ್ಲಿ ನಡೆದ encounter ಕುರಿತು ಗೃಹ ಸಚಿವ ವಿಜಯ್ ಶರ್ಮಾ ಮಾತನಾಡಿದ್ದು, “22 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದಾನೆ. ನಮ್ಮ ಸರ್ಕಾರ ಹುತಾತ್ಮ ಯೋಧನ ಕುಟುಂಬದೊಂದಿಗೆ ನಿಂತಿದೆ. ಸೈನಿಕರ ಸಾಹಸದ ಬಲದಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ.

ಕಾಂಕೇರ್-ನಾರಾಯಣಪುರ ಗಡಿ ಪ್ರದೇಶದಲ್ಲಿ ನಕ್ಸಲರ ಚಲನೆ ಬಗ್ಗೆ ಮಾಹಿತಿ ಪಡೆದ ಬಳಿಕ, ಜಂಟಿ ಪೊಲೀಸ್ ಪಡೆ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಡಿಆರ್ಜಿ/ಬಿಎಸ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಾಯಿತು.

ಕಳೆದ ತಿಂಗಳು ಬಿಜಾಪುರದಲ್ಲಿಯೂ ಭಾರಿ ಎನ್ಕೌಂಟರ್ ನಡೆದಿದ್ದು, 31 ನಕ್ಸಲರು ಹತ್ಯೆಯಾಗಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page