back to top
20.9 C
Bengaluru
Thursday, July 31, 2025
HomeKarnatakaChikkaballapuraಕತ್ತು ಕೊಯ್ದು ಸ್ನೇಹಿತರಿಂದಲೇ ಯುವಕನ ಕೊಲೆ

ಕತ್ತು ಕೊಯ್ದು ಸ್ನೇಹಿತರಿಂದಲೇ ಯುವಕನ ಕೊಲೆ

- Advertisement -
- Advertisement -

Sidlaghatta, Chikkaballapur : ಯುವಕನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ (Seegehalli Village, Sidlaghatta Taluk) ಮಂಗಳವಾರ ನಡೆದಿದೆ. ಶೀಗೆಹಳ್ಳಿ ಗ್ರಾಮದ ಮೋಹನ್ (28) ಎಂಬ ಯುವಕ ಕೊಲೆಯಾಗಿದ್ದು (Murder), ಸ್ನೇಹಿತರೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Chikkaballapur Sidlaghatta Seegehalli Village Murder Crime
ಮೋಹನ್ (28)

ಮಂಗಳವಾರ ಮೋಹನ್ ಮೋಜಿಗೆಂದು ಸ್ನೇಹಿತರಾದ ಪ್ರಭಾಕರ್, ಸುಮನ್, ನಂದನ್ ಜೊತೆ ತೆರಳಿದ್ದು, ಶೀಗೆಹಳ್ಳಿ ಹಾಗೂ ಗೆಜ್ಜಿಗಾನಹಳ್ಳಿಯ ಮಾರ್ಗಮಧ್ಯೆ ಇರುವ ನಿಲಗಿರಿ ತೋಪಿನಲ್ಲಿ ಕಾಲಹರಣ ಮಾಡುತ್ತಿದ್ದ ಸಮಯದಲ್ಲಿ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಮೋಹನ್​ ನನ್ನು ಆತನ ಸ್ನೇಹಿತರು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು (Sidlaghatta Rural Police), ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊಲೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page