
Bengaluru: ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐದು ಮಂದಿ ಸದಸ್ಯರನ್ನು ನೇಮಿಸಿ (Backward Classes Commission) ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಮಧುಸೂದನ್ ನಾಯಕ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸದಸ್ಯರ ನೇಮಕದಲ್ಲಿ ವಿಳಂಬವಾಗಿತ್ತು.
ಇದೀಗ ನೇಮಕಗೊಂಡ ಸದಸ್ಯರು
- ಮೈಸೂರು: ಶಿವಣ್ಣಗೌಡ
- ಧಾರವಾಡ: ಡಾ. ಸಿ.ಎಂ. ಕುಂದಗೋಳ
- ಕಲಬುರ್ಗಿ: ಚಂದ್ರಪ್ಪ
- ರಾಮನಗರ: ಡಾ. ಜಿ.ಎನ್. ಶ್ರೀಕಂಠಯ್ಯ
- ದಕ್ಷಿಣ ಕನ್ನಡ: ಪ್ರತಿಭಾ ಕುಲಾಯಿರ
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜಾತಿ ಮರುಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ನಡೆಸಿದ್ದ ಸಮೀಕ್ಷೆ ವಿರೋಧಕ್ಕೆ ಗುರಿಯಾಗಿ ನಿಲ್ಲಿಸಲಾಗಿತ್ತು. ಈಗ ಹೊಸದಾಗಿ ಮರುಸಮೀಕ್ಷೆಗೆ ತೀರ್ಮಾನ ಕೈಗೊಳ್ಳಲಾಗಿದೆ ಮತ್ತು ಅದನ್ನು 90 ದಿನಗಳಲ್ಲಿ ಪೂರ್ಣಗೊಳಿಸಲು ಗುರಿ ಇಡಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಆಯೋಗದ ಎಲ್ಲಾ ಸದಸ್ಯರನ್ನು ನೇಮಿಸಿ ಸರ್ಕಾರ ಕ್ರಮ ಕೈಗೊಂಡಿದೆ.