Home Karnataka Dakshina Kannada ಮಂಗಳೂರಿನಲ್ಲಿ Bangladesh ಪ್ರಜೆಯ ಬಂಧನ

ಮಂಗಳೂರಿನಲ್ಲಿ Bangladesh ಪ್ರಜೆಯ ಬಂಧನ

Arrest

Mangaluru: ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು (Mangaluru) ಪೊಲೀಸರ ತಂಡವು ಮಂಗಳೂರು ಹೊರವಲಯದ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 25 ವರ್ಷದ ಬಾಂಗ್ಲಾದೇಶ (Bangladesha) ಪ್ರಜೆ ಅನರುಲ್ ಶೇಖ್ ಅವರನ್ನು ಬಂಧಿಸಿದೆ. ಈತ ಮೂರು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಲಾಲ್​​​ಗೋಲ್ ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದ್ದನು.

ಮೂರು ವರ್ಷಗಳ ನಂತರ, ಈತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಉಡುಪಿಗೆ ಬಂದು, ಮಂಗಳೂರು ಹೊರವಲಯದ ರೋಹನ್ ಎಸ್ಟೇಟ್ ಗಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಂಗಳೂರು ಪೊಲೀಸರು ಕೇರಳದ ಕೋಝಿಕ್ಕೋಡ್ ನ ಶಮೀರ್ ಪಿ.ಕೆ ಎಂಬಾತನನ್ನು ಬಂಧಿಸಿದ್ದಾರೆ. ಶಮೀರ್ ಪಿ.ಕೆ ಮಂಗಳೂರಿಗೆ ಹೈಡ್ರೋವೀಡ್ ಗಾಂಜಾ ತರುತ್ತಿದ್ದಾಗ, ಬಪ್ಪನಾಡು ಬಳಿಯಲ್ಲಿ ಬಂಧಿಸಲಾಗಿದೆ.

738 ಗ್ರಾಂ ಗಾಂಜಾ, ಕಾರು, ಮತ್ತು ಮೊಬೈಲ್ ವಶಪಡಿಸಿಕೊಂಡು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2024ರ ಅಕ್ಟೋಬರ್ ತಿಂಗಳಲ್ಲಿ ಉಡುಪಿಯ ಪೊಲೀಸರು 9 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ವಶಕ್ಕೆ ಪಡೆದರು. ಇವರು ಮೀನುಗಾರಿಕಾ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಮ್ಮದ್ ಮಾಣಿಕ್ ಎಂಬಾತನನ್ನು ತಡೆಯಲಾಗಿದ್ದು, ತನಿಖೆಯಲ್ಲಿ ಇತರೆ ಅನೇಕ ಪ್ರಜೆಗಳ ಅಕ್ರಮ ವಾಸವೂ ಪತ್ತೆಯಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version