Home Karnataka Bengaluru ಶಾಲೆಗಳಿಗೆ Bomb Threat: ಹೈ ಅಲರ್ಟ್‌ನಲ್ಲಿ ಪೊಲೀಸರು

Bengaluru ಶಾಲೆಗಳಿಗೆ Bomb Threat: ಹೈ ಅಲರ್ಟ್‌ನಲ್ಲಿ ಪೊಲೀಸರು

Bomb threat

Bengaluru: ಬೆಂಗಳೂರಿನ ಕುಂಬಳಗೋಡು, ಕಲಾಸಿಪಾಳ್ಯ ಮತ್ತು ರಾಜರಾಜೇಶ್ವರಿ ನಗರದಲ್ಲಿರುವ ಕೆಲ ಶಾಲೆಗಳಿಗೆ ಬಾಂಬ್ ಇಟ್ಟಿರುವ ಬಗ್ಗೆ ಇ-ಮೇಲ್ ಮೂಲಕ ಬೆದರಿಕೆ (Bomb threat) ಸಂದೇಶ ಬಂದಿದೆ.

ಈ ಸಂದೇಶವನ್ನು ಪಡೆದ ಕೂಡಲೇ ಸ್ಥಳೀಯ ಪೊಲೀಸರು ಆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬೆದರಿಕೆಯಲ್ಲಿ, ಹೈದರಾಬಾದಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಕೊಡಿಸದಿದ್ದರೆ ಬಾಂಬ್ ಸ್ಫೋಟಿಸುತ್ತೇವೆ ಎಂದು ತಿಳಿಸಲಾಗಿದೆ.

ಆ ಅತ್ಯಾಚಾರ ಪ್ರಕರಣವು ಕರ್ನಾಟಕಕ್ಕೆ ಏನು ಸಂಬಂಧವಿದೆ? ಯಾಕೆ ಇಲ್ಲಿ ಬೆದರಿಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ಇದೇ ರೀತಿಯಲ್ಲಿ, ಹಾಸನದ ವಿದ್ಯಾಸೌಧ ಪಬ್ಲಿಕ್ ಮತ್ತು ವಿದ್ಯಾಸೌಧ ಕಿಡ್ಸ್ ಶಾಲೆಗಳಿಗೆ ಭಾನುವಾರ ರಾತ್ರಿ ಬಾಂಬ್ ಸ್ಫೋಟದ ಬೆದರಿಕೆ ಸಂದೇಶವೊಂದು ಬಂದಿದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಂಬ್ ಸಿಡಿಸುತ್ತದೆ ಎಂದು ಬರೆಯಲಾಗಿತ್ತು. ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಈ ತರಹದ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ವೈಟ್ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ನಂತರ ಇಂಥ ಸಂದೇಶಗಳು ಹೆಚ್ಚಿವೆ.

ಕೆವಲ ಕಳೆದ ಒಂದೂವರೆ ತಿಂಗಳಲ್ಲಿ ಈ ರೀತಿಯ ನಾಲ್ಕನೇ ಪ್ರಕರಣವಾಗಿದೆ. ಏಪ್ರಿಲ್ 27 ರಂದು ವಾರಾಣಸಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಮಿಥ್ಯೆ ಬೆದರಿಕೆ ಸಂದೇಶವಿತ್ತು. ಅದಾದ ಎರಡು ದಿನಗಳ ನಂತರ, ಏಪ್ರಿಲ್ 29 ರಂದು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿಗೆ ಬಾಂಬ್ ಹಾಗೂ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಸಂದೇಶವಿತ್ತು.

ಈಗ ಹಾಸನ ಮತ್ತು ಬೆಂಗಳೂರಿನ ಶಾಲೆಗಳಿಗೂ ಇಂತಹ ಬೆದರಿಕೆ ಬಂದಿರುವುದರಿಂದ, ಪೊಲೀಸರು ತೀವ್ರ ಕಾವಲಿನಲ್ಲಿ ಇರುತ್ತಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version