Home India Ramzan ಮಾಸದಲ್ಲಿ ಮುಸ್ಲಿಂ ನೌಕರರಿಗೆ ವಿಶೇಷ ಅನುಕೂಲ– BJP ಆಕ್ರೋಶ

Ramzan ಮಾಸದಲ್ಲಿ ಮುಸ್ಲಿಂ ನೌಕರರಿಗೆ ವಿಶೇಷ ಅನುಕೂಲ– BJP ಆಕ್ರೋಶ

Ramzan

Hyderabad: ಪವಿತ್ರ ರಂಜಾನ್ (Ramzan) ಮಾಸದ ಸಮಯದಲ್ಲಿ ಮುಸ್ಲಿಂ ಸರ್ಕಾರಿ ನೌಕರರು ಕಚೇರಿಯಿಂದ ಬೇಗನೆ ಹೊರಡುವಂತೆ ತೆಲಂಗಾಣ ಸರ್ಕಾರ (Telangana government) ಆದೇಶ ಹೊರಡಿಸಿದೆ. ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಉದ್ಯೋಗಿಗಳಿಗೆ ಪ್ರಾರ್ಥನೆಗಾಗಿ ಒಂದು ಗಂಟೆ ಮುಂಚಿತವಾಗಿ ಕೆಲಸ ಮುಗಿಸಲು ಅವಕಾಶ ನೀಡಿದೆ. ಮಾರ್ಚ್ 1 ಅಥವಾ 2ರಿಂದ ಪ್ರಾರಂಭವಾಗುವ ರಂಜಾನ್ ಮಾಸದ ಅವಧಿಯಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಆದೇಶವು ಮುಸ್ಲಿಂ ಶಿಕ್ಷಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ ಕಾರ್ಮಿಕರು, ಮಂಡಳಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಮಾರ್ಚ್ 2ರಿಂದ 31ರವರೆಗೆ ಸಂಜೆ 4 ಗಂಟೆಗೆ ಕಚೇರಿಗಳನ್ನು ಬಿಡಲು ಅವಕಾಶವಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅವರು ಪೂರ್ಣ ಕಾರ್ಯಾವಧಿ ಸೇವೆ ನೀಡಬೇಕಾಗುತ್ತದೆ.

ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಮುಸ್ಲಿಮರನ್ನು ಖುಷಿಪಡಿಸುವ ರಾಜಕೀಯ ತಂತ್ರವಿದು ಎಂದು ಆರೋಪಿಸಿ, ನವರಾತ್ರಿಯ ಉಪವಾಸದ ಸಮಯದಲ್ಲಿ ಹಿಂದೂಗಳಿಗೆ ಇಂತಹ ಸೌಲಭ್ಯ ನೀಡಲಾಗಿದೆಯೇ? ಎಂದು ಪ್ರಶ್ನಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version