
Islamabad: ಭಾರತದ ವಿರುದ್ಧ ವಿಷ ಹೊರಹಾಕುತ್ತಿದ್ದ ಮತ್ತೊಬ್ಬ ಭಯೋತ್ಪಾದಕನ ಸಾವಿಗೆ ಪಾಕಿಸ್ತಾನದಲ್ಲಿ ತೆರೆ ಬಿದ್ದಿದೆ. ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ಇಸಾರ್ (Terrorist Abdul Aziz Issar) ನಿಧನರಾಗಿದ್ದಾರೆ.
ಅವನ ಸಾವು ನಿಗೂಢವಾಗಿದ್ದು, ಈ ಬಗ್ಗೆ ಪಾಕಿಸ್ತಾನ ಸರ್ಕಾರವೂ, ಜೈಶ್ ಸಂಘಟನೆಯವರೂ ಯಾವುದೇ ವಿವರ ನೀಡಿಲ್ಲ. ವರದಿಗಳ ಪ್ರಕಾರ, ಪಾಕಿಸ್ತಾನದ ಬಹಾವಲ್ಪುರಲ್ಲಿ ಅವನು ಶವವಾಗಿ ಪತ್ತೆಯಾದ. ಇದೇ ಊರಲ್ಲಿ ಜೈಶ್ನ ಪ್ರಧಾನ ಕಚೇರಿಯೂ ಇದೆ.
ಅಬ್ದುಲ್ ಅಜೀಜ್ ಇತ್ತೀಚೆಗೆ ಜೈಶ್ ಉಗ್ರರ ಸಭೆಯಲ್ಲಿ ಭಾರತದ ವಿರುದ್ಧ ಕಿಡಿಕಾರಿದ್ದರು. ಭಾರತವೂ ಸೋವಿಯತ್ ಯೂನಿಯನ್ (USSR) ಷರತ್ತಿಗೆ ಬಿದ್ದಂತೆ ಕಾಣಬೇಕು ಎಂದು ಬೆದರಿಕೆ ಹಾಕಿದ್ದರು. ಆದರೆ, ಈಗ ಆತನೇ ಶವವಾಗಿ ಬೀದಿಯಲ್ಲಿ ಪತ್ತೆಯಾಗಿದ್ದಾನೆ.
ಪಾಕಿಸ್ತಾನದಲ್ಲಿ ಯುವಕರನ್ನು ಭಾರತ ವಿರೋಧಿ ಭಾವನೆಗಳಿಗೆ ಪ್ರಚೋದಿಸುತ್ತಿದ್ದ ಅಬ್ದುಲ್ ಅಜೀಜ್ರ ಸಾವು, ಜೈಶ್ ಸಂಘಟನೆಯ ನೇಮಕಾತಿ ಹಾಗೂ ಬ್ರೈನ್ವಾಶ್ ಕಾರ್ಯಾಚರಣೆಗೆ ದೊಡ್ಡ ಹೊಡೆತವಾಗಿದೆ.
ಜೈಶ್ಗೆ ಸಂಬಂಧಿಸಿದ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಅವರು ಬಹಾವಲ್ಪುರದಲ್ಲಿ ಸಮಾಧಿ ಮಾಡಲಾದ ಬಗ್ಗೆ ದೃಢಪಡಿಸಿದ್ದರೂ, ಅವರ ಸಾವಿಗೆ ನಿಖರವಾದ ಕಾರಣವನ್ನು ಹೊರಹಾಕಿಲ್ಲ. ಕೆಲವು ವರದಿಗಳ ಪ್ರಕಾರ, ಹೃದಯಾಘಾತವೇ ಈ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಭಾರತದ ವಿರುದ್ಧ ವಿಧ್ವಂಸಕ ಚಟುವಟಿಕೆ ನಡೆಸುತ್ತಿದ್ದ ಭಯೋತ್ಪಾದಕ ಅಬ್ದುಲ್ ಅಜೀಜ್ ಇಸಾರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪಾಕ್ ನೆಲದಲ್ಲೇ ಇಂಥ ಶತ್ರು ಶಮನಗೊಂಡಿರುವುದು ಗಮನಾರ್ಹ.